ಬೆಂಗಳೂರು: ನಟಿ ಬೃಂದಾ ಆಚಾರ್ಯ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೀತು ಎಂಬ ಶೀರ್ಷಿಕೆಯ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಡಾ. ಗೌರಿಶ್ರೀ ಕಥೆ, ಚಿತ್ರಕಥೆ, ನಿರ್ದೇಶನವಿದೆ. ಜನರಕ್ಷಕ ಮತ್ತು ಅಮೂಲ್ಯ ನಂತರ ಗೌರಿ ಶ್ರೀ ಅವರ ಮೂರನೇ ಚಿತ್ರ ಇದಾಗಿದೆ.
ಚಿತ್ರ ಮಂಗಳವಾರ ಸೆಟ್ಟೇರಿದ್ದು, ಬೃಂದಾ ರೀತು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೀತು ಅಂದರೆ ಋತುಗಳು, ಇದು ಮಂಡ್ಯದ ನೈಜ ಕಥೆಯನ್ನು ಆಧರಿಸಿದೆ. ನಾನು ಬಬ್ಲಿ, ಸ್ವಾವಲಂಭಿ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಮದುವೆಯ ನಂತರ ಆಕೆಯ ಜೀವನದಲ್ಲಿ ತಿರುವುಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.