News Karnataka Kannada
Thursday, April 25 2024
ಬೆಂಗಳೂರು ನಗರ

ಕರ್ನಾಟಕದಲ್ಲಿ ಕಾಂಗ್ರೆಸ್ ಬಿರುಗಾಳಿಗೆ ಕೊಚ್ಚಿ ಹೋದ ಬಿಜೆಪಿ

Bengaluru: List of Congress candidates to be released today
Photo Credit : News Kannada

ಬೆಂಗಳೂರು: ಕಲ್ಯಾಣ ಕರ್ನಾಟಕ ಹೇಳಿಕೇಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ನೆಲ. ಇದೇ ನೆಲದಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳಿಸುತ್ತೇ ಅನ್ನೋ ನಿರೀಕ್ಷೆ ನಿಜವಾಗಿದೆ. ಇಲ್ಲಿರೋ 41 ಸ್ಥಾನಗಳ ಪೈಕಿ 25 ರಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ರೆ, ಬಿಜೆಪಿ ಗೆದ್ದಿರೋದು 11 ಸ್ಥಾನ ಮಾತ್ರ. ಅದರಲ್ಲೂ ಬಳ್ಳಾರಿಯ ಜಿಲ್ಲೆಯ ಐದೂ ಕ್ಷೇತ್ರಗಳು ಕಾಂಗ್ರೆಸ್‌ ಮಡಿಲಿಗೆ ಬಿದ್ದಿವೆ. ಯಾದಗಿರಿ, ರಾಯಚೂರು, ಕಲಬುರಗಿಯಲ್ಲೂ ಕಾಂಗ್ರೆಸ್‌ ಪಾರಮ್ಯ ಮೆರೆದಿದೆ.

ಕಿತ್ತೂರು ಕರ್ನಾಟಕದಲ್ಲೂ ಕಾಂಗ್ರೆಸ್‌ ದಿಗ್ವಿಜಯ ಸಾಧಿಸಿದ್ದು, 44 ಕ್ಷೇತ್ರಗಳ ಪೈಕಿ ಬರೋಬ್ಬರಿ 28 ರಲ್ಲಿ ಕಾಂಗ್ರೆಸ್‌ ಸುನಾಮಿ ಎದ್ದಿದೆ. 15 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ವಿಷ್ಯ ಅಂದ್ರೆ ಬೆಳಗಾವಿಯ 18ಕ್ಷೇತ್ರಗಲ್ಲಿ 11 ಕ್ಷೇತ್ರ ಕಾಂಗ್ರೆಸ್‌ ಮಡಿಲಿಗೆ ಬಿದ್ದಿವೆ. ವಿಜಯಪುರದಲ್ಲಿ 6, ಬಾಗಲಕೋಟೆಯಲ್ಲಿ 5 ಸೀಟ್‌ಗಳು ಕಾಂಗ್ರೆಸ್‌ ತೆಕ್ಕೆಗೆ ಜಾರಿವೆ.

ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಸುಂಟರಗಾಳಿ ಎದ್ದಿದ್ದು, 19 ಕ್ಷೇತ್ರಗಲ್ಲಿ 16 ಕ್ಷೇತ್ರಗಳು ಕಾಂಗ್ರೆಸ್‌ ತೆಕ್ಕೆಗೆ ಬಿದ್ದಿವೆ. ಇಲ್ಲಿಯ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಗೆದ್ದಿದ್ದು ಮೂರೇ ಕ್ಷೇತ್ರ ಮಾತ್ರ. ಹಾವೇರಿ, ದಾವಣಗೆರೆ, ಚಿತ್ರದುರ್ಗದಲ್ಲಿ ಬಿಜೆಪಿ ಧೂಳೀಪಟವಾಗಿದ್ದು, ಜಿಲ್ಲೆಗೊಂದರಂತೆ ಮೂರು ಕ್ಷೇತ್ರ ಗೆದ್ದಿದೆ.

ಕಾಂಗ್ರೆಸ್‌ನ ಪ್ರಚಂಡ ಬಹುಮತದಲ್ಲಿ ಹಳೇ ಮೈಸೂರಿನ 9 ಜಿಲ್ಲೆಗಳ ಪಾತ್ರ ದೊಡ್ಡದಿದೆ. 57 ಕ್ಷೇತ್ರಗಳ ಪೈಕಿ 36 ರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಅದ್ರಲ್ಲೂ ಸಿದ್ದು ತವರು ಮೈಸೂರಿನಲ್ಲಿ 8, ತುಮಕೂರಲ್ಲಿ 7, ಹಾಗೂ ಮಂಡ್ಯದಲ್ಲಿ 5 ಸೀಟ್‌ ಬಾಚಿಕೊಂಡಿದೆ. ಭದ್ರಕೋಟೆಯಲ್ಲಿ ಜೆಡಿಎಸ್‌ ಗೆದ್ದಿದ್ದು 14 ಕ್ಷೇತ್ರ ಸ್ಥಾನ ಮಾತ್ರ. ಜೆಡಿಎಸ್‌ಗೆ ಹಾಸನದಲ್ಲಿ 4 ಸ್ಥಾನ ಬಂದ್ರೆ, ಕಳೆದ ಬಾರಿ ಕ್ಲೀನ್‌ ಸ್ವೀಪ್‌ ಮಾಡಿದ್ದ ಮಂಡ್ಯದಲ್ಲಿ ಜೆಡಿಎಸ್‌ಗೆ ಸಿಕ್ಕಿದ್ದು 1 ಸ್ಥಾನ ಮಾತ್ರ. ಇನ್ನು ಮೋದಿ ಕರೆಸಿ ಅಬ್ಬರದ ಪ್ರಚಾರ ನಡೆಸಿದ್ದ ಬಿಜೆಪಿಗೆ ಸಿಕ್ಕಿದ್ದು 5 ಸ್ಥಾನ ಮಾತ್ರ. ಉಳಿದಂತೆ ಮಲೆನಾಡಿನಲ್ಲೂ ಕಾಂಗ್ರೆಸ್‌ ದಿಗ್ವಿಜಯ ಸಾಧಿಸಿದ್ದು, 12 ಸ್ಥಾನಗಳ ಪೈಕಿ 8 ರಲ್ಲಿ ಗೆದ್ದಿದೆ. ಚಿಕ್ಕಮಗಳೂರಿನಲ್ಲಂತೂ ಕ್ಲೀನ್ ಸ್ವೀಪ್‌ ಮಾಡಿದೆ.

ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಸುನಾಮಿ ಎದ್ದಿದ್ರು, ಕರಾವಳಿಯಲ್ಲಿರೋ ಬಿಜೆಪಿ ಅಲೆಯನ್ನ ತಡೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ರಾಜ್ಯದ ಉದ್ದಗಲಕ್ಕೂ ಬಿಜೆಪಿ ಧೂಳೀಪಟವಾಗಿದ್ರೆ, ಕರಾವಳಿಯಲ್ಲಿ ನೆಲೆ ಉಳಿಸಿಕೊಂಡಿದೆ. 19 ಸ್ಥಾನಗಳ ಪೈಕಿ 13 ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, 6 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ಗೆ ಜಯಗಳಿಸಿದೆ . ಅದರಲ್ಲೂ ಉಡುಪಿಯನ್ನ ಕ್ಲೀನ್‌ ಸ್ವೀಪ್‌ ಮಾಡಿದ ಬಿಜೆಪಿ 5 ಸ್ಥಾನ ಬಾಚಿಕೊಂಡಿದೆ.

ಒಟ್ಟಿನಲ್ಲಿ ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್‌ ಹರಡಿಕೊಂಡಿದ್ದು, ಕರಾವಳಿಯಲ್ಲಿ ಮಾತ್ರ ಬಿಜೆಪಿ ಗಟ್ಟಿಯಾಗಿ ನಿಂತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು