ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ತಯಾರಿ ನಡೆಸಿದ್ದು ಶನಿವಾರ ರಾತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಸಿದ್ದರಾಮಯ್ಯ ಮೈಸೂರಿನಲ್ಲಿದ್ದು, ಅಲ್ಲಿಂದ ಅವರು ಬೆಂಗಳೂರಿಗೆ ಬಂದ ತಕ್ಷಣವೇ ಶಾಸಕಾಂಗ ಸಭೆ ನಡೆಯಲಿದೆ. ಆಪರೇಶನ್ ಕಮಲ ಆತಂಕ ಇರುವ ಕಾರಣ ಕೈ ಶಾಸಕರನ್ನು ರಾಜಸ್ತಾನದ ಉದಯಪುರದ ತಾಜ್ ಲೇಕ್ ಪ್ಯಾಲೇಸ್ ಗೆ ಸ್ಥಳಾಂತರ ಮಾಡುವ ಲಕ್ಷಣವಿದೆ.