News Karnataka Kannada
Thursday, April 25 2024
Cricket
ಬೆಂಗಳೂರು ನಗರ

ಹೊನಕೆರೆ ನಂಜುಂಡೇ ಗೌಡರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ

Honakere Nanjunde Gowda wins Qadri Shamanna Journalism Award
Photo Credit : By Author

ಬೆಂಗಳೂರು: ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಈ ಬಾರಿ ಹಿರಿಯ ಪತ್ರಕರ್ತರಾದ ಬಳ್ಳಾರಿಯ ವಿಶೇಷ ವರದಿಗಾರರಾದ ಹೊನಕೆರೆ ನಂಜುಂಡೇ ಗೌಡ ಅವರಿಗೆ ಲಭಿಸಿದೆ. ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಹಲವು ದಶಕಗಳಿಂದ ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿ ಕನ್ನಡ ಪತ್ರಿಕೋದ್ಯಮಕ್ಕೆ ಉತ್ತಮ ಸೇವೆ ಸಲ್ಲಿಸಿರುತ್ತಾರೆ.

ಇದುವರೆಗೆ ಈ ಪ್ರಶಸ್ತಿಯನ್ನು 29 ಹಿರಿಯ ಪತ್ರಕರ್ತರು ಪಡೆದಿದ್ದು, ಇವರು ೩೦ನೇಯವರು. ಪ್ರಶಸ್ತಿ 15ಸಾವಿರ ರೂ ನಗದು ಹಾಗೂ ಫಲಕ ಹೊಂದಿದೆ. ನಂಜುoಡೇಗೌಡರು ನಡೆ-ನುಡಿಯಲ್ಲಿ ಕಟ್ಟುನಿಟ್ಟು. ಮೈಸೂರಿನ ಪತ್ರಕರ್ತರ ಪಡೆಗೆ ಸೇರಿದ ಇವರು ದೆಹಲಿ, ಧಾರವಾಡ, ಶಿವಮೊಗ್ಗ, ದಾವಣಗೆರೆ, ಬೆಂಗಳೂರಿನಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡವರು. ಪತ್ರಕರ್ತನಾದವನಿಗೆ ಹಳ್ಳಿಯಿಂದ ದಿಲ್ಲಿಯವರೆಗೆ ಅನುಭವ ಇರಬೇಕೆಂದು ಹೇಳುವುದುಂಟು. ಅದರಂತೆ ಹೊನಕೆರೆ ನುಂಜುಂಡೇಗೌಡ ಅಪಾರ ಅನುಭವ ಪಡೆದುಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊನಕೆರೆ ಇವರ ಗ್ರಾಮ. ಗ್ರಾಮೀಣ ಭಾಷೆಯ ಗಮ್ಮತ್ತು ಅವರ ಮಾತಿನಲ್ಲಿ ಹಾಗೆ ಉಳಿದುಕೊಂಡಿದೆ. ಒಟ್ಟು 35 ವರ್ಷಗಳ ಅನುಭವ. ಜಿ-20 ಸಮ್ಮೇಳನದಿಂದ ಹಿಡಿದು ಧಾರವಾಡ ಜಿಲ್ಲೆಯ ಸತ್ತೂರು ಗ್ರಾಮದ ರೈತನ ಆತ್ಮಹತ್ಯೆವರೆಗೆ ಎಲ್ಲ ಆಗುಹೋಗುಗಳನ್ನು ವಸ್ತುನಿಷ್ಠವಾಗಿ ವರದಿ ಮಾಡಿದವರು. ಮನಮೋಹನಸಿಂಗ್, ಎಸ್.ಎಂ. ಕೃಷ್ಣ ಅವರೊಂದಿಗೆ ಪಾಕಿಸ್ತಾನ, ಸೌದಿ ಅರೇಬಿಯಾ ಕಂಡವರು. ನೇಪಾಳ ಭೂಕಂಪದ ನೋವನ್ನು ಅನುಭವಿಸಿದವರು. ಈಗ ಬಳ್ಳಾರಿಯಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಎಚ್ಚರದ ಹದ್ದಿನ ಕಣ್ಣು ಹಾಗೆ ಇದೆ. ಅವರಿಗೆ ಈ ಪ್ರಶಸ್ತಿ ಜೀವಮಾನದ ಸೇವೆಗೆ ಸಂದ ಸಮ್ಮಾನ. ಕಳೆದ ವರ್ಷ ಈ ಪ್ರಶಸ್ತಿಯನ್ನು ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಗೋಪಾಲ ಹೆಗಡೆ ಅವರಿಗೆ ನೀಡಲಾಗಿತ್ತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು