ಬೆಂಗಳೂರು: ನಿಮಗೆ ನಿಜವಾಗಿಯೂ ಧಮ್ ಇದ್ದರೆ ಆರ್ಎಸ್ಎಸ್ ಮತ್ತು ಬಜರಂಗ ದಳ ಮಾಡಿ ಎಂದು ಮಾಜಿ ಸಚಿವ ಆರ್.ಅಶೋಕ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅಶೋಕ, “ನಿಮ್ಮ ತಂದೆಗೆ ಆರ್ಎಸ್ಎಸ್ ಅನ್ನು ನಿಷೇಧಿಸಲು ಸಾಧ್ಯವಾಗಲಿಲ್ಲ, ಅದನ್ನು ನಿಮ್ಮ ಅಜ್ಜಿಗೆ ಮಾಡಲು, ನಿಮ್ಮ ದೊಡ್ಡಪ್ಪನಿಂದಲೂ ಏನೂ ಮಾಡಲು ಸಾಧ್ಯವಾಗಲಿಲ್ಲ, ಈಗ ನೀವೇನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ನಿಮಗೆ ಧೈರ್ಯವಿದ್ದರೆ ಆರ್ಎಸ್ಎಸ್ ಅನ್ನು ನಿಷೇಧಿಸಿ. ಆರ್ಎಸ್ಎಸ್ ನಿಷೇಧಿಸಿದರೆ ನಿಮ್ಮ ಸರ್ಕಾರ ಮೂರು ತಿಂಗಳಲ್ಲಿ ಉರುಳಲಿದೆ ಎಂದು ಹೇಳಿದ್ದಾರೆ.
ಆರ್ಎಸ್ಎಸ್ನ ಲಕ್ಷಗಟ್ಟಲೆ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ನಿಮಗೆ ನಾನು ಸವಾಲು ಹಾಕುತ್ತೇನೆ ಒಂದು ಶಾಖೆಯ ಮೇಲೆ ನಿಷೇಧ ಹೇರುವ ಮೂಲಕ ನೀವು ನಮಗೆ ನಿಮ್ಮ ತಾಕತ್ತೇನೆ ಎಂದು ತೋರಿಸಿ ಎಂದು ಸವಾಲು ಒಡ್ಡಿದ್ದಾರೆ. ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಮೌನವಾಗಿದ್ದಾರೆ ಆದರೆ ಉಪ ಮುಖ್ಯಮಂತ್ರಿ ಶಿವಕುಮಾರ್ ರೌಡಿಯಂತೆ ವರ್ತಿಸುತ್ತಿದ್ದಾರೆ ಎಂದು ಅಶೋಕ್ ಹೇಳಿದರು. ಪ್ರತಿ ಸಭೆಯಲ್ಲೂ ಶಿವಕುಮಾರ್ ಸಿಎಂ ಮುಂದಿಟ್ಟುಕೊಂಡು ಪೊಲೀಸ್ ಇಲಾಖೆ ಹಾಗೂ ಹಿಂದೂ ಸಂಘಟನೆಗಳಿಗೆ ಬೆದರಿಕೆ ಹಾಕುತ್ತಿದ್ದಾರೆ.