ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಎಂ.ಬಿ ಪಾಟೀಲ್ ರಾಜ್ಯ ರಾಜಕೀಯದಲ್ಲಿ ಪ್ರಭಾವಿ ಹೆಸರು. ಬಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕ, ಜಲಸಂಪನ್ಮೂಲ ಸಚಿವರಾಗಿ ಹೆಸರು ಗಳಿಸಿದವರು. ಈಗ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ.
ಮಲ್ಲನಗೌಡ ಬಸನಗೌಡ ಪಾಟೀಲ್ ಎಂಬುದು ಎಂ.ಬಿ.ಪಾಟೀಲ್ರ ಪೂರ್ಣ ಹೆಸರು. ಪೂರ್ಣ ಹೆಸರು ಹೇಳಿದರೆ ಎಲ್ಲರಿಗೂ ಬೇಗನೆ ಅವರ ಪರಿಚಯವಾಗುವುದಿಲ್ಲ. ಎಂಬಿ ಪಾಟೀಲ್ 1964 ಅಕ್ಟೋಬರ್ 7 ರಂದು ಜನಿಸಿದರು. ರಾಜಕೀಯ ಕೌಟುಂಬಿಕ ಹಿನ್ನೆಲೆ ಉಳ್ಳವರಾಗಿರುವ ಎಂ.ಬಿ ಪಾಟೀಲ್, ಅವರ ತಂದೆ ಬಿ.ಎಂ ಪಾಟೀಲ್ ಕೂಡ ಶಾಸಕರಾಗಿದ್ದವರು. ತಾಯಿ ಕಮಲಾಬಾಯಿ ಪಾಟೀಲ್, ಸಹೋದರ ಸುನೀಲಗೌಡ ಪಾಟೀಲ್ ವಿಧಾನ ಪರಿಷತ್ ಸದಸ್ಯ. ಪಾಟೀಲ್ ಬಿಇ ಸಿವಿಲ್ ಇಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಎಂ.ಬಿ ಪಾಟೀಲ್ ಅವರ ಪತ್ನಿ ಆಶಾ ಪಾಟೀಲ್. ಈ ದಂಪತಿಗೆ ಬಸನಗೌಡ ಪಾಟೀಲ್ ಹಾಗೂ ದೃವ ಪಾಟೀಲ್ ಇಬ್ಬರು ಪುತ್ರರಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ, ಆಣೆಕಟ್ಟುಗಳ, ನಾಲೆಗಳ ಆಧುನೀಕರಣ, ಭದ್ರಾಮೇಲ್ದಂಡೆ ಯೋಜನೆ, ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆ, ಮೆಕೆದಾಟು, ಎತ್ತಿನಹೊಳೆ, ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆ ಹಿಂದಿನ ಶಕ್ತಿಯಾಗಿ ಎಂ. ಬಿ ಪಾಟೀಲ್ ಕೆಲಸ ಮಾಡಿದ್ದಾರೆ.