ಲಕ್ನೋ: ಕಳೆದ ಕೆಲವು ವರ್ಷಗಳಿಂದ ಗೇಮಿಂಗ್ ಆ್ಯಪ್ ಮೂಲಕ ನಡೆಸುತ್ತಿದ್ದ ಮತಾಂತರ ದಂಧೆಯನ್ನು ಉತ್ತರ ಪ್ರದೇಶ ಪೊಲೀಸರು ಭೇದಿಸಿದ್ದಾರೆ. ಗಾಜಿಯಾಬಾದ್ನ ಸಂಜಯ್ ನಗರದ ಮಸೀದಿ ಸಮಿತಿಯ ಸದಸ್ಯನನ್ನು ಈ ಸಂಬಂಧ ಬಂಧಿಸಲಾಗಿದೆ, ಮಸೀದಿಯ ಸಮಿತಿ ಸದಸ್ಯ ಬಲ್ಲಿಯಾ ಮೂಲದ ಅಬ್ದುಲ್ ರೆಹಮಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ರೆಹಮಾನ್ ಅವರು ಕೆಲವು ತಿಂಗಳ ಹಿಂದೆ ಸಮಿತಿಯನ್ನು ತೊರೆದಿದ್ದಾರೆ ಎಂದು ಮಸೀದಿ ಸಮಿತಿಯು ಪೊಲೀಸರಿಗೆ ತಿಳಿಸಿದೆ, ಆದರೆ ಈ ಬಗ್ಗೆ ಪುರಾವೆ ದೊರೆತಿಲ್ಲ.
ಫರಿದಾಬಾದ್ನ ಅಪ್ರಾಪ್ತ ಬಾಲಕನ ತಂದೆ ತನ್ನ ಮಗ ಗೇಮಿಂಗ್ ಆ್ಯಪ್ ಮೂಲಕ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾನೆ ಮತ್ತು ಸಂಜಯ್ ನಗರದ ಮಸೀದಿಗೆ ಭೇಟಿ ನೀಡುವಂತೆ ಆತ ಪ್ರಭಾವ ಬೀರಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ ನಂತರ ತನಿಖೆ ಪ್ರಾರಂಭವಾಯಿತು. ಮಗ ಜಿಮ್ಗೆ ಹೋಗುವುದಾಗಿ ಸುಳ್ಳು ಹೇಳಿ ಮಸೀದಿಗೆ ಭೇಟಿ ನೀಡುತ್ತಿರುವುದನ್ನು ಅವರು ಮನಗಂಡಿದ್ದರು.
ರೆಹಮಾನ್ ನಾಲ್ಕು ಯುವಕರನ್ನು ಮತಾಂತರಿಸಲು ಪ್ರಯತ್ನಿಸಿದ್ದಾರೆ ಎಂದು ಸಾಬೀತುಪಡಿಸಲು ತಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಡಿಸಿಪಿನಿಪುರ್ಣ್ ಅಗರ್ವಾಲ್ ತಿಳಿಸಿದ್ದಾರೆ.
2021 ರಿಂದ ನಾಲ್ವರು ಯುವಕರೊಂದಿಗೆ ಮಾತನಾಡುತ್ತಿದ್ದರು ಮತ್ತು ಅವರಿಗೆ ಧರ್ಮದ ಬಗ್ಗೆ ವೀಡಿಯೊಗಳನ್ನು ಕಳುಹಿಸುತ್ತಿದ್ದರು ಎಂದು ನಾವು ಅರಿತಿದ್ದೇವೆ ಎಂದು ಅಧಿಕಾರಿ ಹೇಳಿದರು. ಬಾಲಕರು ಗೇಮಿಂಗ್ ಅಪ್ಲಿಕೇಶನ್ ಮೂಲಕ ರೆಹಮಾನ್ನೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ. ಅಲ್ಲದೆ ರೆಹಮಾನ್ ಅವರೊಂದಿಗೆ ತಮ್ಮ ಫೋನ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಬಾಲಕನ ವರ್ತನೆಯಲ್ಲಿ ಬದಲಾವಣೆ ಕಂಡ ಅವನ ತಾಯಿ ಅವನಿಗೆ ಸಲಹೆ ನೀಡಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ” ಎಂದು ಎಸಿಪಿ ತಿಳಿಸಿದಾರೆ.