News Kannada
Thursday, September 28 2023
ಆರೋಗ್ಯ

ಎಚ್ಚರ. . .: ರಾಜ್ಯದಲ್ಲೇ ಹೆಚ್ಚುತ್ತಿದೆ ಡೆಂಘೀ ಪ್ರಕರಣ

dengue cases
Photo Credit : News Kannada

ಬೆಂಗಳೂರು: ಮಳೆಯಿಲ್ಲದೇ ಜನತೆ ಕುಡಿ​ಯುವ ನೀರು, ಕೃಷಿ ಚಟು​ವ​ಟಿ​ಕೆಗೆ ಹಿನ್ನ​ಡೆ​ಯಿಂದ ತತ್ತರಿಸುತ್ತಿದ್ದಾರೆ. ಇದರ ಮಧ್ಯೆ ಈಗ ಡೆಂಘೀ​ಜ್ವ​ರ ಕಾಟ ಶುರುವಾಗುತ್ತಿದೆ. ಮನೆ, ಹೋಟೆಲ್‌ ಇನ್ನಿ​ತರ ಕಡೆ​ಗ​ಳ​ಲ್ಲಿ ಹೆಚ್ಚು ದಿನಗಳ ಕಾಲ ನೀರು ಸಂಗ್ರಹಿಸುತ್ತಾರೆ. ಹೀಗಿ​ರು​ವಾಗ ಜಿಲ್ಲೆಯಲ್ಲಿ ವಿವಿ​ಧೆಡೆ ಡೆಂಘೀ ಪ್ರಕರಣಗಳು ಕಂಡು​ಬ​ರು​ತ್ತಿವೆ.

ರಾಜ್ಯದಲ್ಲಿ ದಿನೇ ದಿನೇ ಡೆಂಘೀ ಕೇಸ್ ಹೆಚ್ಚಾಗುತ್ತಿದೆ. ತಿಂಗಳಲ್ಲಿ 3 ಸಾವಿರಕ್ಕೂ ಹೆಚ್ಚು‌ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಬೆಂಗಳೂರಲ್ಲೇ ಅತಿಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಲ್ಲಿಯವರೆಗೆ ಡೆಂಘೀ ಜ್ವರದಿಂದ 8,563 ಜನರು ಬಳಲುತ್ತಿದ್ದಾರೆ. 90 ಸಾವಿರಕ್ಕೂ ಅಧಿಕ ಡೆಂಘೀ ಶಂಕಿತರ ರಕ್ತ ತಪಾಸಣೆ ಮಾಡಲಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಬೆಂಗಳೂರು- 4,979., ಮೈಸೂರು- 430., ಉಡುಪಿ- 346., ಶಿವಮೊಗ್ಗ- 198., ದಕ್ಷಿಣ ಕನ್ನಡ- 178., ಕಲಬುರಗಿ- 176., ವಿಜಯಪುರ- 170., ಚಿತ್ರದುರ್ಗ- 158., ಬೆಳಗಾವಿ- 149., ಹಾಸನ- 139., ದಾವಣಗೆರೆ- 134., ಚಿಕ್ಕಮಗಳೂರು- 128., ತುಮಕೂರು- 122., ಧಾರವಾಡ- 115 ಮತ್ತು ಕೊಡಗು- 110 ಪ್ರಕರಣಗಳು ದಾಖಲಾಗಿವೆ.

ರೋಗ ಲಕ್ಷಣಗಳೇನು?
ವ್ಯಕ್ತಿ​ಯಲ್ಲಿ ಡೆಂಘೀಜ್ವ​ರ ಕಾಣಿಸಿಕೊಂಡರೆ ಸುಲಭವಾಗಿ ಗುಣವಾಗುತ್ತದೆ. ಒಮ್ಮೆ ಡೆಂಘೀಜ್ವರ ಬಂದವರಿಗೆ ಮತ್ತೊಮ್ಮೆ ಡೆಂಘೀ ವೈರಾಣು ಸೋಂಕು ತಗುಲಿದರೆ ಪರಿಣಾಮ ಗಂಭೀರವಾಗುತ್ತದೆ. ದಿಢೀರ್‌ ಜ್ವರ, ತಲೆನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆನೋವು, ತೋಳು, ಮೈ-ಕೈ ನೋವು, ಅತಿಸಾರ ಈ ರೀತಿ ಹಲವು ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅನಂತರ ದೇಹದ ಮೇಲೆ ಕೆಂಪು ದದ್ದು ಹಾಗೂ ಕರುಳಿನಲ್ಲಿ ರಕ್ತಸ್ರಾವ ಆಗುತ್ತದೆ ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಮಾಹಿತಿ.

ಡೆಂಘೀ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಚಿಕಿತ್ಸೆ ಪಡೆಯದೇ ಇರುವುದು, ದೀರ್ಘಕಾಲ ಜ್ವರ ಇದ್ದರೂ ನಿರ್ಲಕ್ಷ್ಯ ಮಾಡುವುದರಿಂದ ರೋಗ ಉಲ್ಬಣಿಸುವ ಸಾಧ್ಯತೆ ಇದೆ. ಜನರು ಜಾಗ್ರತೆ ವಹಿಸಿ, ಸಕಾಲಕ್ಕೆ ಚಿಕಿತ್ಸೆ ಪಡೆಯಯಬೇಕು. ಇದ​ರಿಂದ ರೋಗ ತಡೆಗಟ್ಟಬಹುದು ಎಂದು ಸಲಹೆ ನೀಡಿದ್ದಾರೆ.

 

 

See also  ಮಳೆಗಾಲದಲ್ಲಿ ಆರೋಗ್ಯಕ್ಕೆ ವರದಾನ ಈ ಗಿಡಮೂಲಿಕೆಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು