ಬೆಂಗಳೂರು: ಮೋದಿ ಜಪಾನ್ ಹೋಗಿ 2 ಸಾವಿರ ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಈ ಹಿಂದೆಯೂ 2016ರಲ್ಲಿಯೂ ಕೂಡ ಮೋದಿ ಜಪಾನ್ಗೆ ತೆರಳಿದ್ದ ವೇಳೆಯೇ ನೋಟು ಅಮಾನ್ಯೀಕರಣ ಮಾಡಿದ್ದರು. ಈಗ ಮತ್ತದೇ ರೀತಿಯ ಕ್ರಮ ಕೈಗೊಂಡು ಜನರನ್ನು ತೊಂದರೆಗೆ ಸಿಲುಕಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಾಂಗ್ರೆಸ್ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದು ದ್ವೇಷ ಹರಡುವ ಸರ್ಕಾರವಲ್ಲ. ಇದು ಪ್ರೀತಿ ಹರಡುವ ಸರ್ಕಾರ ಎಂದರು. 5 ಗ್ಯಾರಂಟಿಗಳನ್ನು ಈಡೇರಿಸಲಿದೆ ಎಂಬ ಭರವಸೆ ನೀಡಿದರು.