ಬೆಂಗಳೂರು: ಕರ್ನಾಟಕದ ಜನರು ಬಿಜೆಪಿಯ ದ್ವೇಷ ಮತ್ತು ಹಣ ಬಲವನ್ನು ಸೋಲಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು. ಪಕ್ಷ ಅಧಿಕಾರಕ್ಕೆ ಬರಲು ಸಹಕರಿಸಿದ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿದರು.
ಜನರು ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್ ಯಾವ ಆಧಾರದಲ್ಲಿ ಚುನಾವಣೆಯಲ್ಲಿ ಜಯ ಪಡೆಯಿತು ಎಂಬ ಅನೇಕ ವರದಿಗಳು ಬಂದಿವೆ. ಬಡವರು, ದಲಿತರು ಮತ್ತು ಆದಿವಾಸಿಗಳು ಹಿಂದುಳಿದವರ ಜೊತೆ ನಿಂತಿದ್ದರಿಂದ ಕಾಂಗ್ರೆಸ್ ಗೆದ್ದಿದೆ ಎಂದು ನಾನು ಹೇಳಲು ಬಯಸುತ್ತೇನೆ ಎಂದರು.
“ನಾವು ಸತ್ಯ ಪರವಾಗಿದ್ದೆವು. ಬಿಜೆಪಿಗೆ ಹಣ, ಅಧಿಕಾರ ಮತ್ತು ಎಲ್ಲವೂ ಇತ್ತು ಆದರೆ ಕರ್ನಾಟಕದ ಜನರು ಅಸತ್ಯದ ತಳಹದಿಯ ಜನರನ್ನು ಸೋಲಿಸಿದ್ದಾರೆ ಎಂದರು.
ಬಿಜೆಪಿ ಭ್ರಷ್ಟಾಚಾರವನ್ನು ಜನರು ಸೋಲಿಸಿದರು. ದ್ವೇಷದ ವಾತಾವರಣವನ್ನು ಅವರು ಸೋಲಿಸಿದರು. ದ್ವೇಷದ ಮಾರುಕಟ್ಟೆಯಲ್ಲಿ ನಾವು ಹಲವಾರು ತೆರೆದಿದ್ದೇವೆ. ಪ್ರೀತಿಯ ಅಂಗಡಿಗಳನ್ನು ತೆರೆದಿದ್ದೇವೆ ಎಂದರು. ಪಕ್ಷ ಘೋಷಿಸಿದ ಐದು ಭರವಸೆಗಳನ್ನು ಈಡೇರಿಸಲಾಗುವುದು ಎಂದು ರಾಹುಲ್ ಗಾಂಧಿ ಜನರಿಗೆ ಭರವಸೆ ನೀಡಿದರು.