News Karnataka Kannada
Thursday, March 28 2024
Cricket
ರಾಮನಗರ

ಬಿಡದಿಯಲ್ಲಿ ಕ್ರೈಸ್ತರಿಂದ ಗರಿ ಹಬ್ಬಾಚರಣೆ

Photo Credit :

ರಾಮನಗರ: ಏಸು  ಕ್ರಿಸ್ತನನ್ನು ಶಿಲುಬೆಗೆ ಏರಿಸುವ ಮುನ್ನ ಜನರು ಗರಿಗಳನ್ನು ಹಿಡಿದು ಸ್ವಾಗತಿಸಿದ್ದ ಸ್ಮರಣಾರ್ಥವಾಗಿ ಬಿಡದಿಯಲ್ಲಿ ಕ್ರೈಸ್ತ ಬಾಂಧವರು ಗರಿಗಳನ್ನಿಡಿದು ಬೈಕ್  ರಾಲಿ ನಡೆಸುವ ಮೂಲಕ ಗರಿ ಹಬ್ಬವನ್ನು ವಿಜೃಂಭಣೆಯಿಂದ  ಆಚರಿಸಿದರು.

ಬಿಡದಿಯ ಬಿಜಿಎಸ್ ವೃತ್ತದ ಬಳಿ ಭಾನುವಾರ ಕುಟುಂಬ ಸಮೇತರಾಗಿ ಜಮಾಯಿಸಿದ ನೂರಾರು ಕ್ರೈಸ್ತರು ತೆಂಗಿನ ಗರಿಗಳನ್ನು ಹಿಡಿದು ಏಸು ಕ್ರಿಸ್ತನನ್ನು ಸ್ಮರಿಸುತ್ತಾ ಬೈಕ್‌ಗಳಲ್ಲಿ ಮೆರವಣಿಗೆ ನಡೆಸಿದರು. ಬಿಡದಿಯ ಬಿಜಿಎಸ್ ವೃತ್ತದಿಂದ ಹೊರಟ ಬೈಕ್ ರ್‍ಯಾಲಿ ಮೆರವಣಿಗೆಯು ಬೆಂಗಳೂರು – ಮೈಸೂರು ಹೆದ್ದಾರಿಯ ಮೂಲಕ ಲಕ್ಷ್ಮೀಸಾಗರ ಗೇಟ್ ಬಳಿಯಿರುವ ಸಮಸ್ತ ದೇಶಗಳ ಪ್ರಾರ್ಥನಾ ಮಂದಿರ ದೇವಾಲಯದವರೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಸಮಸ್ತ ದೇಶಗಳ ಪ್ರಾರ್ಥನಾ ಮಂದಿರ ದೇವಾಲಯದ ಧರ್ಮಗುರು ಫಾದರ್ ಅಭಿಷೇಕ್ ದೇವ ಅವರು ಮಾತನಾಡಿ,  ಏಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ ದಿನವನ್ನು ಗುಡ್ ಫ್ರೈಡೆ ಎಂದು ಪ್ರಪಂಚದಾದ್ಯಂತ ಕ್ರೈಸ್ತರು ಭಕ್ತಿಪೂರ್ವಕವಾಗಿ ಆಚರಿಸುತ್ತಾರೆ. ಏಸುವನ್ನು ಶಿಲುಬೆಗೆ ಏರಿಸುವ ಐದು ದಿನಗಳ ಮುನ್ನ ಯೆರೋಸಲೆಮ್ ಎಂಬ ಪಟ್ಟಣಕ್ಕೆ ಏಸು ಕ್ರಿಸ್ತ ಭೇಟಿ ನೀಡಿದ್ದ ಸಂದರ್ಭದಲ್ಲಿ ಆತನ ಶಿಷ್ಯರು ಮತ್ತು ಜನರು ತಾವು ಧರಿಸಿದ್ದ ಬಟ್ಟೆಗಳನ್ನು ದಾರಿಯಲ್ಲಿ ಹಾಸಿ ಮತ್ತು ತೆಂಗಿನ ಗರಿಗಳನ್ನು ಹಿಡಿದು ಸ್ವಾಗತಿಸಿದ್ದರು.

ಏಸು ಕ್ರಿಸ್ತ ತಮ್ಮ ಪಟ್ಟಣಕ್ಕೆ ಬಂದಿದ್ದಕ್ಕಾಗಿ ಸಂತೋಷದಿಂದ ಕುಣಿದು ಕುಪ್ಪಳಿಸಿದ ಜನರು ತಾವು ಕಂಡಿದ್ದ ಎಲ್ಲಾ  ಮಹತ್ಕಾರ್ಯಗಳ ವಿಷಯದಲ್ಲಿ, ಕರ್ತನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ, ಪರಲೋಕದಲ್ಲಿ ಮಂಗಳ, ಮೇಲಣ ಲೋಕದಲ್ಲಿ ಮಹಿಮೆ ಎಂದು ಜೋರಾದ ಶಬ್ದಗಳಿಂದ ಅವರನ್ನು ಕೊಂಡಾಡಿದರು. ಇದರ ಸವಿನೆನಪಿಗಾಗಿ ಗರಿಗಳ ಭಾನುವಾರವೆಂದು ವಿಶ್ವದಾಧ್ಯಂತ ಕ್ರೈಸ್ತರು ಗರಿಗಳ ಹಬ್ಬವನ್ನಾಗಿ ಆಚರಿಸುತ್ತಾ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಡದಿಯಲ್ಲಿ ಗರಿಗಳ ಭಾನುವಾರವನ್ನು ಹಬ್ಬವನ್ನಾಗಿ ಆಚರಿಸಲಾಗುತ್ತಿದ್ದು ಗರಿಗಳನ್ನು ಹಿಡಿದು ಏಸುವನ್ನು ಸ್ಮರಿಸಿ ಪಾರ್ಥನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು