News Karnataka Kannada
Friday, April 19 2024
Cricket
ತುಮಕೂರು

ತುಮಕೂರು: ದಲಿತ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಪೊಲೀಸರಿಂದ ಅಡ್ಡಿ

ಉತ್ತರಪ್ರದೇಶದ ಕಾಸ್‌ಗಂಜ್‌ನಲ್ಲಿ ಟ್ರ್ಯಾಕ್ಟರ್ ಟ್ರಾಲಿ ಕೊಳಕ್ಕೆ ಬಿದ್ದು  15 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ನಡೆದಿದೆ.
Photo Credit : IANS

ತುಮಕೂರು : ದಲಿತ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಪೊಲೀಸರು ಅಡ್ಡಿಪಡಿಸಿರುವ ಘಟನೆ ತುಮಕೂರು ನಗರದ ಭೀಮಸಂದ್ರದಲ್ಲಿ ಸೋಮವಾರ (ಜ.24) ನಡೆದಿದೆ.

ಮಣ್ಣು ಮಾಡುವ ಜಾಗ ಬೇರೆಯವರಿಗೆ ಸೇರಿದ್ದು ಎಂದು ಅಂತ್ಯ ಸಂಸ್ಕಾರವನ್ನು ನಿಲ್ಲಿಸಿದ್ದಾರೆ. ಅಲ್ಲದೆ, ತೆಗೆದಿದ್ದ ಗುಂಡಿಯನ್ನು ಮುಚ್ಚಿಸುವ ಮೂಲಕ ಪೊಲೀಸರು ಅಮಾನವೀಯತೆ ಮೆರೆದಿದ್ದಾರೆ.

ಮಂಜುನಾಥ್ (50) ಎಂಬುವರ ಅಂತ್ಯ ಸಂಸ್ಕಾರಕ್ಕೆ ಕುಟುಂಬ ಮುಂದಾಗಿತ್ತು. ಬೆಳಗ್ಗೆ 10 ಗಂಟೆಗೆ ಮೃತದೇಹ ತರಲಾಗಿತ್ತು. ಈ ವೇಳೆ ಹೋಯ್ಸಳ ಜೀಪ್​​ನಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಮೃತರ ಕುಟುಂಬವನ್ನು ತಡೆದಿದ್ದಾರೆ. ಈ ಮುಂಚೆ ಇದೇ ಜಾಗದಲ್ಲಿ ದಲಿತ ಮಹಿಳೆಯ ಅಂತ್ಯ ಸಂಸ್ಕಾರವನ್ನು ಮಾಡಿದ್ದರು. ಇದೀಗ ಈ ಜಾಗ ಸೌಭಾಗ್ಯಮ್ಮ ಎಂಬುವರ ಹೆಸರಿಗೆ ಸೇರಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಸೌಭಾಗ್ಯಮ್ಮರ ಹೆಸರಿನಲ್ಲೇ ಭೂಮಿ ಇರುವ ಬಗ್ಗೆ ದಾಖಲೆ ಇದೆ ಎಂದು ಪೊಲೀಸರು ವಾದಿಸಿದ್ದು, ಹೆಣದ‌ ಮುಂದೆಯೇ ಪೊಲೀಸ್ ಮತ್ತು ಕುಟುಂಬಸ್ಥರ ನಡುವೆ ವಾಕ್ಸಮರ ನಡೆದಿದೆ. ಸದ್ಯ ಅಂತ್ಯಸಂಸ್ಕಾರವಾಗದೇ ವಿವಾದಿತ ಸ್ಥಳದಲ್ಲೇ ಇರುವ ಮೃತದೇಹಕ್ಕೆ ಅಂತ್ಯಸಂಸ್ಕಾರ ನಡೆಸಲು ಅನುವು ಮಾಡಿಕೊಡಿ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಬೆಳಗ್ಗೆ 10 ಗಂಟೆಯಿಂದಲೂ ಹೆಣ ಇಟ್ಟುಕೊಂಡು ಅಂತ್ಯ ಸಂಸ್ಕಾರಕ್ಕೆ ಕಾಯುತ್ತಿದ್ದಾರೆ. ಇದು ದಲಿತರಿಗೆ ಅಂತ ಇರೋ ಇಮಾಮ್ತಿ ಜಮೀನು ಎಂದು ದಲಿತ ಕುಟುಂಬದವರು ಹೇಳುತ್ತಿದ್ದಾರೆ. ಮೊದಲಿನಿಂದಲೂ ಇದೇ ಜಾಗದಲ್ಲಿ 400 ಕ್ಕೂ ಹೆಚ್ಚು ಅಂತ್ಯಸಂಸ್ಕಾರ ಮಾಡಿದ್ದೇವೆ ಎಂದು ಹೇಳಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು