News Kannada
Friday, June 09 2023
ತುಮಕೂರು

ತುಮಕೂರು: ಕಾಂಗ್ರೆಸ್ ವಿರುದ್ಧ ಚಲವಾದಿ ನಾರಾಯಣಸ್ವಾಮಿ ಆಕ್ರೋಶ

Tumakuru: Chalavadi Narayanaswamy lashes out at Congress
Photo Credit : By Author

ತುಮಕೂರು: ಕಳೆದ ಐವತ್ತು ವರ್ಷಗಳಿಂದ ಮೀಸಲಾತಿ ಹೆಚ್ಚಳಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಗಳು ಹೋರಾಟ ನಡೆಸುತ್ತಿದ್ದರೂ, ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಅತ್ತ ತಿರುಗಿಯೂ ನೋಡಲಿಲ್ಲ. ಈಗ ಬಿಜೆಪಿ ಪಕ್ಷ ಮಾಡಿದ ಕೆಲಸವನ್ನು ಕಣ್ಣೊರೆಸುವ ತಂತ್ರ ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಎಂ.ಎಲ್.ಸಿ. ಹಾಗೂ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಯಪುರ, ದಿಬ್ಬೂರಿನಲ್ಲಿ ನಗರ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಬೂತ್ ವಿಜಯ ಸಂಕಲ್ಪ ಅಭಿಯಾನ ದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಹೊಸದಾಗಿ ಎಸ್ಸಿ.ಎಸ್ಟಿ ಜಾತಿಗೆ ಬೇರೆ ಜಾತಿಗಳನ್ನು ಸೇರಿಸುತಿದ್ದರೇ ವಿನಃ ಅವರ ಮೀಸಲಾತಿ ಹೆಚ್ಚಳ ಮಾಡುವ ಮಾತೇ ಇರಲಿಲ್ಲ. ಈ ಸಮುದಾಯಗಳನ್ನು ಕೇವಲ ಓಟ್ ಬ್ಯಾಂಕಾಗಿ ಮಾತ್ರ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಪರಿಗಣಿಸಿದ್ದವು ಎಂಬುದಕ್ಕೆ ಇದಕ್ಕಿಂತ ನಿರ್ದೇಶನ ಬೇಕೆ ಎಂದು ಪ್ರಶ್ನಿಸಿದ ಅವರು ಬಿಜೆಪಿ ಪಕ್ಷ ಎಂದಿಗೂ ದಲಿತರನ್ನು ಓಟ್ ಬ್ಯಾಂಕ್ ಎಂದು ಪರಿಗಣಿಸಿಲ್ಲ. ಅವರ ಸಮಗ್ರ ಅಭಿವೃದ್ದಿಗೆ ಎಲ್ಲಾ ರೀತಿಯ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಕೈಗೊಂಡಿದೆ ಎಂದರು.

ಬಿಜೆಪಿಯವರು ದಲಿತರು ಸೇರಿದಂತೆ ಮತದಾರರಿಗೆ ಯಾವುದೇ ಆಸೆ, ಅಮೀಷ ಒಡ್ಡುವುದಿಲ್ಲ. ಬದಲಿಗೆ ಮಾಡಿ ತೋರಿಸುತ್ತೇವೆ. ಕಾಂಗ್ರೆಸ್ ಪಕ್ಷದ ರೋಟಿಗರ್ ಔರ್ ಮಕಾನ್(ಗರಿಬ್ ಹಠಾವೋ) ಸಾಧ್ಯವಾಗಿದೆಯೇ, ಆದರೆ ಇದನ್ನು ಬಿಜೆಪಿ ಪಕ್ಷ ಮಾಡಿ ತೋರಿಸಿದೆ. ೮೦ ಕೋಟಿ ಜನರಿಗೆ ಪಡಿತರ ಆಹಾರ ವಿತರಿಸಲಾಗುತ್ತಿದೆ. ಅನಿವಾರ್ಯ ಎನಿಸಿದಾಗ 220 ಕೋಟಿ ಡೋಸ್ ಕೋರೋನ ವಿರುದ್ದ ವ್ಯಾಕ್ಸಿನ್ ನೀಡಲಾಗಿದೆ. ಹೆಣ್ಣು ಮಕ್ಕಳಿಗೆ ಎರಡು ಸಾವಿರ ನೀಡುತ್ತೇವೆ ಎನ್ನತ್ತೀರಲ್ಲ ಇದು ಓಟ್ ಬ್ಯಾಂಕ್ ರಾಜಕಾರಣ ಅಲ್ಲವೇ? ನಿಮ್ಮದು ಓಟ್ ಬ್ಯಾಂಕ್ ರಾಜಕಾರಣ, ಇದು ಪ್ರಜಾಪ್ರಭುತ್ವ ವಿರೋಧಿ. ನಮ್ಮದು ಸೇವಾ ರಾಜಕಾರಣ ಎಂದು ಚಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಬೂತ್ ವಿಜಯ ಸಂಕಲ್ಪ ಅಭಿಯಾನದ ಮೂಲಕ ಕಳೆದ ಇಷ್ಟು ವರ್ಷಗಳಲ್ಲಿ ಬಿಜೆಪಿ ಸರಕಾರ ಜನರಿಗಾಗಿ ಏನು ಮಾಡಿದೆಯೋ ಅದನ್ನು ಪ್ರತಿ ಮನೆ ಮನೆಗೆ ತಿಳಿಸುವುದೇ ಇದರ ಉದ್ದೇಶ. ಕಾಂಗ್ರೆಸ್‌ ದು ಕುರ್ಚಿ ಹಿಡಿಯುವ ಅಭಿಯಾನ. ನಾವು ಗಾಳಿಯಲ್ಲಿ ಬಂದು ಗಾಳಿಯಲ್ಲಿ ಹೋಗುವವರಲ್ಲ. ಇಲ್ಲಿಯೇ ಇದ್ದು ಜನರೊಟ್ಟಿಗೆ ಬೆರೆತು ಕೆಲಸ ಮಾಡುವವರು. ಈ ಭಾಗದ ಶಾಸಕರಾಗಿ ಜ್ಯೋತಿಗಣೇಶ್ ಜನಮನ್ನಣೆ ಗಳಿಸಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ತುಮಕೂರು ನಗರದ ಚಿತ್ರಣವೇ ಬದಲಾಗಿದೆ. ಅವರ ಕೈಹಿಡಿಯುವ ಕೆಲಸವನ್ನು ಮತದಾರರು ಮಾಡಬೇಕೆಂದು ನಾರಾಯಣಸ್ವಾಮಿ ಮನವಿ ಮಾಡಿದರು.

ಈ ವೇಳೆ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಪಾಲಿಕೆ ಸದಸ್ಯರಾದ ವೀಣಾ ಮನೋಹರಗೌಡ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಟಿ.ಕೆ.ನರಸಿಂಹಮೂರ್ತಿ, ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಹನುಮಂತರಾಜು.ಟಿ.ಹೆಚ್, ನಗರ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತರಾಯಪ್ಪ, ವಿರೂಪಾಕ್ಷಪ್ಪ, ವಾರ್ಡ್ ಅಧ್ಯಕ್ಷರಾದ ಸಿದ್ದಲಿಂಗಯ್ಯ, ನವೀನ್, ಪಾಲಿಕೆ ನಾಮಿನಿ ಸದಸ್ಯರಾದ ಮಂಜುನಾಥ್, ಪ್ರತಾಪ್, ವಿಶ್ವನಾಥ್, ಯೋಗೀಶ್, ನರಸಿಂಹಮೂರ್ತಿ, ಬೂತ್ ಅಧ್ಯಕ್ಷರಾದ ಶ್ರೀನಿವಾಸ್, ಪರಮೇಶ್, ಶಶಿಧರ್, ಶಿವರಾಜು, ಶಿವಣ್ಣ, ಹತ್ಯಾಳಯ್ಯ, ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

See also  ವಿಜಯಪುರ: ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ, ಸಕಲ ಸರ್ಕಾರಿ ಗೌರವಗಳೊಂದಿಗೆ ಜ.3ರಂದು ಅಂತಿಮ ಕ್ರಿಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು