News Kannada
Tuesday, May 30 2023
ತುಮಕೂರು

ತುಮಕೂರು: ಮತ ಬಹಿಷ್ಕಾರ ಸ್ಥಳಕ್ಕೆ ಮಾಜಿ ಡಿ.ಸಿ ಎಂ ಪರಮೇಶ್ವರ್ ಭೇಟಿ

Tumakuru: Former DCM Parameshwara visits poll boycott site
Photo Credit : News Kannada

ತುಮಕೂರು: ತುಮಕೂರು ತಾಲೂಕಿನ ಕೋರ‌ಹೋಬಳಿಯ ಹಾಗೂ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಅಹೋಬಲ ಅಗ್ರಹಾರ ಗ್ರಾಮದಲ್ಲಿ ಮತ ಬಹಿಷ್ಕಾರದ ಎಚ್ಚರಿಕೆ ನೀಡಿದ್ದ ಪ್ರತಿಭಟನ ಸ್ಥಳಕ್ಕೆ ಮಾಜಿ‌ ಡಿಸಿ ಎಂ ಡಾ.ಜಿ ಪರಮೇಶ್ವರ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನೆಡೆಸಿದ್ದರು.

ತುಮಕೂರು ಗ್ರಾಮಾಂತರದ ಕೋರ ಹೋಬಳಿಯು ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಈ ಭಾಗದಲ್ಲಿ ಮರಳು ಮಾಫೀಯಾ,ಬಲಾಡ್ಯರಿಂದ ಅತಿಯಾದ ಗಣಿಗಾರಿಕೆ ನೆಡೆಯುತ್ತಿದೆ. ಹೋಬಳಿಯ ಬೆಳಧರ ಗ್ರಾಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಹೋಬಲ ಅಗ್ರಹಾರ,ಚಿನಿವಾರನಹಳ್ಳಿ,ಜಕ್ಕೇನಹಳ್ಳಿ,ಮುದ್ಧುರಾಮಯ್ಯನ ಪಾಳ್ಯ ಸೇರಿದಂತೆ ಒಟ್ಟು 12 ಗ್ರಾಮಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಸಾಕಷ್ಟು ಸಮಸ್ಯೆ ಎದುರಿಸಿದ ಗ್ರಾಮಸ್ಥರು ಗಣಿಗಾರಿಕೆ ನಿಲ್ಲಿಸದಿದ್ದರೆ ಮೇ. 10 ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ಮತ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಅಹೋ ರಾತ್ರಿ ಪ್ರತಿಭಟನೆ ನಡೆಸಿದರು.

ಮತ ಬಹಿಷ್ಕಾರದ ಸುದ್ಧಿ Newskannada.com,News karnataka.com ವೆಬ್ ನಲ್ಲಿ‌ ಸುದ್ಧಿ ಮಾಡಲಾಗಿತ್ತು, ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಹಾಗೂ ಮಾಜಿ ಡಿ.ಸಿ ಎಂ ಡಾ.ಜಿ ಪರಮೇಶ್ವರ್ ಅವರ ಕ್ಷೇತ್ರವಾಗಿರುವುದರಿಂದ ಎಚ್ಚೇತ್ತ ಡಾ.ಜಿ‌ಪರಮೇಶ್ವರ್ ಇಂದು(ಸೋಮವಾರ) ಸಂಜೆ ಭೇಟಿ ನೀಡಿ ಪ್ರತಿಭಟನಾ ಕಾರರೊಂದಿಗೆ ಚರ್ಚೆ ನಡೆಸಿದರು.

ಈ‌ ಸಂದರ್ಭದಲ್ಲಿ ಪ್ರತಿಭಟನಾ ಕಾರರೊಂದಿಗೆ ಮಾತನಾಡಿದ ಡಾ.ಜಿ‌ಪರಮೇಶ್ವರ್, ಪರಿಸರವನ್ನು‌ ಹಾಳು ಮಾಡುವ ಹಕ್ಕು ನಮಗಿಲ್ಲ. ಅಲ್ಲದೇ ನಾನು ಪರಿಸರ ಪೋಷಿಸುವವನು,ನಾನು ಪರಿಸರ ಹಾಳುಮಾಡುವವಷ್ಟು ಕೆಟ್ಟವನಲ್ಲ. ಈ ವಿಷಯ,ಇಲ್ಲಿ ಗಣಿಗಾರಿಕೆಯಿಂದ ಆಗುತ್ತಿರುವ ಸಮಸ್ಯೆ ನನಗೆ ಎರಡು ತಿಂಗಳ ಹಿಂದೆ ಗೊತ್ತಾಗಿದೆ. ನನಗೆ ನಾಲ್ಕು ವರ್ಷದ ಹಿಂದೆ ಗೊತ್ತಾಗಿದ್ದರೆ. ಗಣಿಗಾರಿಕೆಗೆ ಅವಕಾಶ ಕೊಡುತ್ತಿರಲಿಲ್ಲ ಎಂದರು.

ಎರಡು ತಿಂಗಳ ಹಿಂದೆ ಈ ವಿಷಯ ಗೊತ್ತಾಗಿದೆ. ಚುನಾವಣೆ ಇದೆ. ಚುನಾವಣೆ ಮುಗಿದ ಮೇಲೆ ಈ ವಿಷಯವಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

See also  ತುಮಕೂರು: ದಲಿತ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಪೊಲೀಸರಿಂದ ಅಡ್ಡಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು