News Kannada
Tuesday, June 06 2023
ತುಮಕೂರು

ತುಮಕೂರು: ಅನಧಿಕೃತ ಕೃಷಿ ನೀರಾವರಿ ಪಂಪ್ ಸೆಟ್ ಬಳಕೆ ಸಕ್ರಮ

Use of unauthorized agricultural irrigation pump sets to be regularised
Photo Credit : News Kannada

ತುಮಕೂರು: ಬೆಸ್ಕಾಂ ನಗರ ಉಪವಿಭಾಗ-2 ರ ಜಯನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೃಷಿ ನೀರಾವರಿ ಪಂಪ್ ಸೆಟ್ ಗಳನ್ನು ಉಪಯೋಗಿಸುತ್ತಿರುವ  ಸ್ಥಾವರಗಳಿಗೆ ಸಂಬಂಧಿಸಿದಂತೆ ಅಕ್ರಮ-ಸಕ್ರಮ ಯೋಜನೆಯಡಿ 2014-15 ರಿಂದ 2022-23 ರವರೆಗೆ ಸಕ್ರಮೀಕರಣ ಶುಲ್ಕ 1೦,೦೦೦ ರೂ. ಮತ್ತು ಇತರೆ ಠೇವಣಿ ಮೊತ್ತಗಳನ್ನು ಪಾವತಿಸಿರುವ ಗ್ರಾಹಕರುಗಳ ಜೇಷ್ಠತಾ ಪಟ್ಟಿಯನ್ನು ನಗರ ಉಪವಿಭಾಗ-2 ರ ಕಛೇರಿ ಹಾಗೂ ಶಾಖಾ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಈವರೆಗೂ ಮೂಲ ಭೂತ ಸೌಕರ್ಯ ಕಲ್ಪಿಸದೇ ಇರುವ, ವೋಲ್ಟೇಜ್ ಸಮಸ್ಯೆಯಿರುವಂತಹ ಹಾಗೂ ಸರ್ವೀಸ್ ಮೇನ್ಸ್ ೩೦ ಮೀಟರ್ಗಿಂತ ದೂರದಿಂದ ಎಳೆದು ಪಂಪ್ಸೆಟ್ ಚಾಲನೆಯಲ್ಲಿರುವ ಗ್ರಾಹಕರು ಉಪವಿಭಾಗ-2 ಕಚೇರಿ ಅಥವಾ ಶಾಖಾ ಕಚೇರಿಗೆ ಭೇಟಿ ನೀಡಿ ಸೂಚನಾ ಫಲಕಗಳಲ್ಲಿ ಪ್ರಕಟಿಸಿರುವ ಜೇಷ್ಠತಾ ಪಟ್ಟಿಯನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.

ಒಂದು ವೇಳೆ ಸಕ್ರಮೀಕರಣ ಶುಲ್ಕ 1೦,೦೦೦ ರೂ. ಮತ್ತು ಇತರೆ ಠೇವಣಿ ಮೊತ್ತಗಳನ್ನು ಪಾವತಿಸಿ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಹಾಗೂ ಆರ್.ಆರ್.ಸಂಖ್ಯೆ ಬಿಟ್ಟು ಹೋಗಿದ್ದಲ್ಲಿ ಅಂತಹ ಗ್ರಾಹಕರು ಏಪ್ರಿಲ್ 13 ರೊಳಗಾಗಿ ಹಣ ಕಟ್ಟಿರುವ ರಸೀದಿ ಮತ್ತು ಇತರೇ ಅಗತ್ಯ ಮೂಲದಾಖಲಾತಿಗಳೊಂದಿಗೆ ಉಪವಿಭಾಗ-2 ರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲವಾದಲ್ಲಿ ಮುಂದಿನ ಆಗು-ಹೋಗುಗಳಿಗೆ ಬೆಸ್ಕಾಂ ಜವಾಬ್ದಾರಿಯಲ್ಲ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

See also  ಮೈಸೂರು: ಮಹಿಳೆಯರ ಆರೋಗ್ಯವನ್ನು ಹೆಚ್ಚಿಸಲು ಮೋಟಾರ್, ಸೈಕಲ್ ರ‍್ಯಾಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು