ತುಮಕೂರು: ತುಮಕೂರು ನಗರ ಕ್ಷೇತ್ರ ಕ್ಕೆ ಜಿ.ಬಿ.ಜ್ಯೋತಿ ಗಣೇಶ್ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ. ಸುರೇಶ್ ಗೌಡ ಅವರುಗಳು ಬಾರೀ ಮೆರವಣಿಗೆ ಯೊಂದಿಗೆ ಚುನಾವಣಾ ಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಬಿ.ಹೆಚ್.ರಸ್ತೆಯ ಗಣೇಶ ದೇವಸ್ಥಾನದ ಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರ ಜಯಘೋಷ ದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆ ಬಿ. ಲಕ್ಕಪ್ಪ ವೃತ್ತ, ಟೌನ್ ಹಾಲ್ ಬಿಜಿಎಸ್ ವೃತ್ತ, ಬಿಎಚ್ ರಸ್ತೆ, ಎಂಜಿ ರಸ್ತೆ ಮೂಲಕ ಸಾಗಿ, ಜಿಲ್ಲಾ ಧಿಕಾರಿ ಕಚೇರಿ ತಲುಪಿತು. ಮೆರವಣಿಗೆ ಮಾರ್ಗದಲ್ಲಿ ಅಭ್ಯರ್ಥಿ ಗಳಿಗೆ ಕ್ರೇನ್ ನಲ್ಲಿ ಬೃಹತ್ ಹೂವಿನ ಹಾರ ಪುಷ್ಪವೃಷ್ಟಿಗೈಯ್ಯಲಾಯಿತು.
ಬಳಿಕ ತುಮಕೂರು ತಾಲ್ಲೂಕು ಕಚೇರಿ ಯಲ್ಲಿ ಉಪವಿಭಾಗಾಧಿಕಾರಿ ಹಾಗೂ ಗ್ರಾಮಾಂತರ ಚುನಾವಣಾ ಧಿಕಾರಿಗಳಿಗೆ ಬಿ. ಸುರೇಶ್ ಗೌಡ ನಾಮಪತ್ರ ಸಲ್ಸಿಸಿದರು. ನಂತಪ ಹೊರಗಡೆ ಜಮಾಯಿಸಿ ದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಭ್ಯರ್ಥಿಗಳಾದ ಸುರೇಶ್ ಗೌಡ, ಜಿ. ಬಿ. ಜ್ಯೋತಿ ಗಣೇಶ್ ಅವರು ಡಬಲ್ ಎಂಜಿನ್ ಸರ್ಕಾರ ದ ಯೋಜನೆ ಗಳು ಪ್ರತಿ ಮನೆ ಮನೆ ತಲುಪಿದ್ದು ಈ ಬಾರಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಗ್ರಾಮಾಂತರ ಹಾಗೂ ನಗರ ಕ್ಷೇತ್ರ ಸೇರಿದಂತೆ ಜಿಲ್ಲೆಯ ಹನ್ನೊಂದು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಗ್ರಾಮಾಂತರ ಕ್ಷೇತ್ರದ ಬಳಿಕ ಪಾಲಿಕೆ ಆವರಣಕ್ಕೆ ಆಗಮಿಸಿದ ಬಿಜೆಪಿ ಮುಖಂಡರು ನಗರ ಅಭ್ಯರ್ಥಿ ಹಾಗೂ ಶಾಸಕ ಜಿ. ಬಿ. ಜ್ಯೋತಿ ಗಣೇಶ್ ಉಮೇದುವಾರಿಕೆಗೆ ಸಾಥ್ ನೀಡಿದರು.
ಸಂಸದ ಹಾಗೂ ನಟ ಜಗ್ಗೇಶ್, ಜಿಲ್ಲಾ ಧ್ಯಕ್ಷ ಹೆಬ್ಬಾಕ ರವಿ, ವಿಧಾನಪರಿಷತ್ ಮಾಜಿ ಸದಸ್ಯ ಡಾ. ಎಂ. ಆರ್. ಹುಲಿನಾಯ್ಕರ್ , ಜಿಪಂ ಮಾಜಿ ಅಧ್ಯಕ್ಷ ವೈ. ಎಚ್ ಹುಚ್ಚಯ್ಯ, ಬಿಜೆಪಿ ಪಾಲಿಕೆ ಸದಸ್ಯರುಗಳು, ಪಕ್ಷದ ವಿವಿಧ ಮೋರ್ಚಾ ದ ಪದಾಧಿಕಾರಿಗಳು, ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ ಸೇರಿ ಇತರ ಮುಖಂಡರು ಮೆರವಣಿಗೆ ಯಲ್ಲಿ ಹಾಜರಿದ್ದರು.