News Kannada
Saturday, September 23 2023
ತುಮಕೂರು

ಕಾಂಗ್ರೆಸ್ ಗ್ಯಾರಂಟಿಗಳ ಅನುಷ್ಠಾನಕ್ಕೆ ಕಂಗಾಲಾದ ಬಿಜೆಪಿ ಅಸಹಜ ವರ್ತನೆ- ಎಸ್.ಆರ್.ಶ್ರೀನಿವಾಸ್ ಟೀಕೆ

Bjp MLA SR Srinivas criticises BJP for its "unnatural behaviour" in implementing Congress guarantees.
Photo Credit : News Kannada

ತುಮಕೂರು: ಕೇಂದ್ರದ ಬಿಜೆಪಿ ಸರ್ಕಾರ ರೈತನ ಖಾತೆಗೆ 2 ಸಾವಿರ ಹಣ ಹಾಕುವುದು ಉದ್ದಾರವಂತೆ, ಕಾಂಗ್ರೆಸ್ ರಾಜ್ಯದಲ್ಲಿ ಮಹಿಳೆಯರಿಗೆ 2 ಸಾವಿರ ಹಣ ನೀಡಿದರೆ ಅಧೋಗತಿಯಂತೆ ಹೀಗೆ ಅಸಹಜ ವರ್ತನೆಯ ಬಿಜೆಪಿ ಮುಖಂಡರಿಗೆ ಕಾಂಗ್ರೆಸ್ ನುಡಿದಂತೆ ನಡೆದಿದ್ದು ಸಹಿಸಲಾಗುತ್ತಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಟೀಕಿಸಿದರು.

ಗುಬ್ಬಿ ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ಯಾರಂಟಿ ಜಾರಿಗೆ ಕಾಲಾವಕಾಶ ಬೇಕು ಅನ್ನುವ ಮಾತು ಹಿರಿಯರಾದ ಯಡಿಯೂರಪ್ಪ ಅವರ ಬಾಯಲ್ಲಿ ಬಂದಿದೆ. ಆದರೆ ಕೆಲವರು ಮಾತ್ರ ಮನಬಂದಂತೆ ಮಾತನಾಡುತ್ತಿದ್ದಾರೆ. ಏನೇ ಆದರೂ ಆರ್ಥಿಕ ನಿರ್ವಹಣೆ ಮಾಡಿದ ಸಿದ್ದರಾಮಯ್ಯ ಅವರಿಗೆ ಹಣದ ಕ್ರೂಢೀಕರಣ ಚೆನ್ನಾಗಿ ತಿಳಿದಿದೆ. ಯಶಸ್ವಿ ಗ್ಯಾರಂಟಿ ಯೋಜನೆ ಜನಮನ ಗೆಲ್ಲಲಿದೆ ಎಂದರು.

ಬಿಜೆಪಿ ಸರ್ಕಾರದಲ್ಲಿದ್ದ ಬಸ್ಸುಗಳೇ ಇಂದಿಗೂ ಓಡಾಡುತ್ತಿವೆ. ಮಹಿಳೆಯರಿಗೆ ಉಚಿತ ಪ್ರಯಾಣ ಅನುವು ಮಾಡುವುದು ಸಮಾಜಮುಖಿ ಕೆಲಸವಾಗಿದೆ. ಸಮಾನತೆ ಬಗ್ಗೆ ಮಾತನಾಡುವ ನಾವುಗಳು ಮಹಿಳೆಯರಿಗೂ ಅವಕಾಶ ಒದಗಿಸುವ ಕೆಲಸಕ್ಕೆ ಈ ಕಾರ್ಯ ಸಹಕಾರಿಯಾಗಿದೆ ಎಂದ ಅವರು ಸರ್ಕಾರ ಬಂದು ಕೇವಲ 20 ದಿನವಾಗಿದೆ. ನಾವು ಯಾವ ಮ್ಯಾಜಿಕ್ ಮಾಡಿಲ್ಲ. ಆದರೂ ಎಲ್ಲಾ ಗ್ಯಾರಂಟಿ ಅನುಷ್ಠಾನಕ್ಕೆ ಪಕ್ಕಾ ಸಿದ್ದವಾಗಿದ್ದೇವೆ. ಬಿಜೆಪಿ ಹೇಳಿದಂತೆ ನಡೆದುಕೊಂಡಿಲ್ಲ. ಆರ್ಥಿಕ ಶಿಸ್ತು ಬಲ್ಲ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ನಡೆಯಲಿದೆ. ಟೀಕೆ ಮಾಡುವ ವಿರೋಧ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಹಲವು ಉಚಿತ ಬಗ್ಗೆ ಪ್ರಸ್ತಾಪ ಮಾಡಿವೆ. ಅದು ದೇಶಕ್ಕೆ ಮಾರಕವಲ್ಲವೇ ಎಂದು ವ್ಯಂಗ್ಯವಾಡಿದರು.

ಚುನಾವಣೆಯ ನಂತರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ 90 ಕೋಟಿ ರೂಗಳು ಕೆಲಸ ಚುರುಕಿನಿಂದ ನಡೆಯಲಿದೆ. ಗಣಿ ಬಾಧಿತ ಪ್ರದೇಶದ ಮೀಸಲು ಅನುದಾನದಲ್ಲಿ 240 ಕೋಟಿ ರೂಗಳ ಕೆಲಸಕ್ಕೆ ಕ್ರಿಯಾ ಯೋಜನೆ ಸಿದ್ದವಾಗಿ ಹಣ ಮಂಜೂರಾಗಿದೆ. ಶೀಘ್ರದಲ್ಲಿ ಅಲ್ಲಿನ ಅವಶ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಆಗಲಿದೆ. ವಿಶ್ವ ಪರಿಸರ ದಿನಾಚರಣೆ ದಿನವಾದ ಇಂದು ಇಡೀ ತಾಲ್ಲೂಕಿನಲ್ಲಿ ಲಕ್ಷಾಂತರ ಸಸಿ ನೆಡುವ ಕಾರ್ಯಕ್ರಮ ಆಯೋಜನೆ ಆಗಲಿದೆ. ಸಸಿ ನೆಡುವ ಜೊತೆಗೆ ಪೋಷಣೆ ಮಾಡುವ ಜವಾಬ್ದಾರಿ ಸಮುದಾಯ ಮಾಡಬೇಕು. ಅರಣ್ಯ ಇಲಾಖೆ ಜೊತೆ ಸ್ಥಳೀಯರು ಕೈ ಜೋಡಿಸಿ ಹಸಿರು ಕ್ರಾಂತಿ ಮಾಡಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಂಘದ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಕೂಡಾ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವಿ.ನಾರಾಯಣ್, ಗೌರವಾಧ್ಯಕ್ಷ ಆರ್.ಜಿ.ನಾಗಭೂಷಣ, ಉಪಾಧ್ಯಕ್ಷ ರಮೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ರಮೇಶ್, ನಿರ್ದೇಶಕರಾದ ಕುಮಾರಸ್ವಾಮಿ, ಗಟ್ಟಿ, ವಲಯ ಅರಣ್ಯಾಧಿಕಾರಿ ದುಗ್ಗಪ್ಪ, ಶಿರಸ್ತೇದಾರ್ ಶ್ರೀರಂಗ ಇನ್ನಿತರರು ಉಪಸ್ಥಿತರಿದ್ದರು.

See also  ತುಮಕೂರು :  ಗಗನಕ್ಕೇರಿದ ಟೊಮೆಟೊ ಬೆಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು