News Karnataka Kannada
Saturday, April 27 2024
ತುಮಕೂರು

ಮಹಿಳಾ ಕುಸ್ತಿಪಟುಗಳು ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

Dalit Sangharsh Samiti protests against sexual harassment of women wrestlers
Photo Credit : News Kannada

ತುಮಕೂರು: ಅಂತಾರಾಷ್ಟ್ರೀಯ ಕುಸ್ತಿಪಟು ಆಯ್ಕೆ ಮಾಡುವ ಆಮಿಷ ತೋರಿಸಿ ಲೈಂಗಿಕವಾಗಿ ಬಳಸಿಕೊಳ್ಳುವ ನೀಚ ಕೆಲಸ ಮಾಡಿದ ಸಂಸದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ ಸಿಂಗ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆ ನಡೆಸಿದರು.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ತಲುಪಿದ ಸಮಿತಿಯ ಸದಸ್ಯರು ಕಚೇರಿ ಮುಂದೆ ಕೆಲ ಕಾಲ ಪ್ರತಿಭಟನೆ ನಡೆಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಹದಿನೇಳು ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ಮಾಡಿರುವ ಸಂಸದನ ಪರ ನಿಂತಿರುವ ಕೇಂದ್ರ ಸರ್ಕಾರದ ನಡವಳಿಕೆ ಖಂಡನೀಯ. ಈ ಬಗ್ಗೆ ಪ್ರಶ್ನಿಸಿದ ಕ್ರೀಡಾಪಟುಗಳ ಮೇಲೆ ಪೊಲೀಸರಿಂದ ದೌರ್ಜನ್ಯ ಕೂಡಾ ಮಾಡಲಾಗಿದೆ. ಫಡರೇಶನ್ ಅಧ್ಯಕ್ಷನನ್ನು ಉಳಿಸಿಕೊಳ್ಳಲು ಮುಂದಾದ ಮೋದಿ ಅವರ ನೇತೃತ್ವದ ಸರ್ಕಾರ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಮಹಿಳಾ ಕ್ರೀಡಾಪಟುಗಳು ರಸ್ತೆಗಿಳಿದು ನ್ಯಾಯಕ್ಕೆ ಹೋರಾಟ ಮಾಡುವ ದುಸ್ಥಿತಿ ತಂದಿದ್ದಲ್ಲದೆ, ವಿಶ್ವದಲ್ಲಿ ಕ್ರೀಡೆಯಲ್ಲಿ ದೇಶದ ಮರ್ಯಾದೆ ಕಾಪಾಡುವ ನಮ್ಮ ಹೆಮ್ಮೆಯ ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಂತರ ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಜಿ.ಎಚ್.ಜಗನ್ನಾಥ್, ತಾಲ್ಲೂಕು ಸಂಚಾಲಕ ಎನ್.ಎ.ನಾಗರಾಜು, ವಿಭಾಗೀಯ ಸಂಚಾಲಕರಾದ ಈಶ್ವರಯ್ಯ, ಅರಿವೆಸಂದ್ರ ಕೃಷ್ಣಪ್ಪ, ಪಪಂ ಸದಸ್ಯ ರೇಣುಕಾಪ್ರಸಾದ್, ಮುಖಂಡರಾದ ಕೊಡಿಯಾಲ ಮಹದೇವು, ನಾಗರಾಜು, ನಾಗಭೂಷಣ, ದಲಿತ್ ಗಂಗಣ್ಣ, ಕರೇತಿಮ್ಮಯ್ಯ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು