News Kannada
Sunday, December 10 2023
ತುಮಕೂರು

ತುಮಕೂರಲ್ಲಿ ದೇವೇಗೌಡ ಚುನಾವಣೆಗೆ ನಿಂತರೆ ಅವರ ಸಂಬಂಧಿಗಳು ವೋಟ್‌ ಹಾಕಲ್ಲ- ಸಂಸದ ಬಸವರಾಜು

Deve Gowda's relatives won't vote if he contests polls in Tumkur: Basavaraju
Photo Credit : News Kannada

ತುಮಕೂರು: ನಮ್ಮ ಪಕ್ಷದವರು ತುಮಕೂರು ಜಿಲ್ಲೆಯಿಂದ ಲೋಕಸಭೆ ಅಭ್ಯರ್ಥಿಯಾಗಿ ದೇವೇಗೌಡ ಅವರನ್ನು ನಿಲ್ಲಿಸಲು ಹೊರಟಿದ್ದಾರೆ. ಆದರೆ ಹೇಮಾವತಿ ನೀರಿನ ವಿಚಾರದಲ್ಲಿ ಜಿಲ್ಲೆಗೆ ಗೌಡರು ಎಂದೂ ಕಂಡರಿಯದಷ್ಟು ಮೋಸ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಬಸವರಾಜು ಹೇಳಿದ್ದಾರೆ.

ಯಾರಿಗಾದರೂ ವೋಟ್‌ ಹಾಕಲಿ. ಆದರೆ ಗೌಡರಿಗೆ ವೋಟ್‌ ಹಾಕಬಾರದು. ಅವರಿಗೆ ವೋಟ್‌ ಹಾಕಿದರೆ ಜಿಲ್ಲೆಯ ಜನತೆ ಪಾಪ ಮಾಡಿದಂತಾಗುತ್ತದೆ ಎಂದರು.

ಲೋಕಸಭೆಗೆ ಜೆಡಿಎಸ್‌ ನವರು ಐದು ಕ್ಷೇತ್ರಗಳಿದ್ದು, ತುಮಕೂರನ್ನು ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ರಕ್ತ ಕೊಟ್ಟರೂ ಜಿಲ್ಲೆಗೆ ಹೇಮಾವತಿ ನೀರು ಕೊಡಲ್ಲ. ಎಂದು ಹೇಳಿದ್ದ ದೇವೇಗೌಡ ಅವರನ್ನು ಜಿಲ್ಲೆಯ ಜನರು ಒಮ್ಮೆ ಸೋಲಿಸಿದ್ದಾರೆ. ಅವರ ಸಂಬಂಧಿಗಳು ಅವರಿಗೆ ವೋಟ್‌ ಹಾಕಲ್ಲ. ಒಕ್ಕಲಿಗ ಸಮುದಾಯದ ಒಬ್ಬರೂ ಮತ ಹಾಕಲ್ಲ ಎಂದರು.

See also  ತುಮಕೂರಿನಲ್ಲಿ ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಸ್ಪರ್ಶ: ಬಾಲಕ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು