News Karnataka Kannada
Tuesday, April 16 2024
Cricket
ತುಮಕೂರು

ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ಕಾರಣ ನಾನೇ: ಮಾಜಿ ಶಾಸಕ ಕೆ.ಎನ್ ರಾಜಣ್ಣ

I was responsible for Deve Gowda's defeat in Lok Sabha elections: Former MLA K N Rajanna
Photo Credit : News Kannada

ತುಮಕೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸದಿದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮುಗಿಸುತ್ತಿದ್ದರು ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದರು.

ಕೊರಟಗೆರೆಯ ರಾಜೀವ ಭವನದ ಆವರಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ,ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಪ್ರಮುಖ ಕಾರಣ ಇದೆ. ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ನೆಲಸಮ ಮಾಡುತ್ತಾರೆ ಎಂಬ ಕಾರಣದಿಂದ ದೇವೇಗೌಡರನ್ನು ಚುನಾವಣೆಯಲ್ಲಿ ಸೋಲಿಸಬೇಕಾಯಿತು ಎಂದರು.

ನನ್ನ ವಿರುದ್ಧ ಮಧುಗಿರಿಯಲ್ಲಿ ಹೇಳಿಕೆ ಕೊಡಲಿ ಅದನ್ನು ಬಿಟ್ಟು ಹಗಲು ರಾತ್ರಿ ದೇವೇಗೌಡರನ್ನು ಗೆಲ್ಲಿಸಲು ಹೋರಾಡಿದ ಪರಮೇಶ್ವರ್ ಅವರನ್ನು ಸೋಲಿಸಿ ಎಂದು ಕಣ್ಣೀರು ಹಾಕುತ್ತಾರೆ ಎಂದರೆ ಎಂತಹ ಡ್ರಾಮಾ ಎನ್ನುವುದನ್ನು ಜನರು ಅರಿಯಬೇಕು ಎಂದು ಮಾಜಿ ಜನರಿಗೆ ತಿಳಿಸಿದರು.

ಜೆಡಿಎಸ್ ಜಾತಿಗೆ ಸೀಮಿತವಾಗಿದ್ದು, ಬಿಜೆಪಿ ಭ್ರಷ್ಟರ ಪಕ್ಷ ಎನ್ನುವುದರಲ್ಲಿ ಅನುಮಾನವಿಲ್ಲ, ಜನಪರವಾಗಿ ಕೆಲಸ ಮಾಡದ ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಂಡು ಭ್ರಷ್ಟಾಚಾರಕ್ಕೆ ಇಂಬು ನೀಡುತ್ತಿದೆ ಎಂದ ಅವರು, ನಾಟಕದ ಕಂಪನಿ ಹುಟ್ಟು ಹಾಕಿರುವುದೇ ಜೆಡಿಎಸ್, ಕುಟುಂಬದವರನ್ನೇ ಸೇರಿಸಿಕೊಂಡು ಕಣ್ಣೀರು ಹಾಕುತ್ತಾರೆ ಎಂದು ವ್ಯಂಗ್ಯವಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು