News Kannada
Tuesday, September 26 2023
ತುಮಕೂರು

ತುಮಕೂರು: ತಾನು ಮಾಡಿದ ತಪ್ಪು ಮತ್ತೊಬ್ಬರ ಮೇಲೆ ಹೊರಿಸಿದ ಬಿಜೆಪಿ ಪರಾಜಿತ ಅಭ್ಯರ್ಥಿ: ಬಾಬು ಹೇಳಿಕೆ

BJP's defeated candidate blames him for his mistake on someone else
Photo Credit : News Kannada

ತುಮಕೂರು:  ತಾನು  ಮಾಡಿದ ತಪ್ಪನ್ನು ಮತ್ತೊಬ್ಬರ ಮೇಲೆ ಹೊರಿಸುವ ಭರದಲ್ಲಿ ಬಿಜೆಪಿಯ ನಿಷ್ಠಾವಂತ ಮುಖಂಡರು ಕಾರ್ಯಕರ್ತರ ನಿಂದನೆ ಮಾಡಿರುವ ಅಭ್ಯರ್ಥಿ ದಿಲೀಪ್ ಕುಮಾರ್ ಹಾಗೂ ಅವರ ಬೆಂಬಲಿಗರ ನಡೆ ಖಂಡನೀಯ. ತೊಡೆ ಮುರಿಯುವ ಮಾತಿಗೆ ನಾವು ಸಿದ್ದ. ಸೇರಿಗೆ ಸವ್ವಾ ಸೇರು ಎಂದು ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಸವಾಲೆಸೆದರು.

ಗುಬ್ಬಿ ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯ ಅವರ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಹಿಂದ ಮತಗಳ ಕ್ರೋಡಿಕರಿಸುವ ಆಲೋಚನೆಯಲ್ಲಿ ಸಭೆ ಕರೆದರೆ ಅಭ್ಯರ್ಥಿ ಸಭೆಗೆ ಬಾರದೆ ಅವರ ಹಣಕಾಸು ನಿರ್ವಹಣೆ ಮಾಡುತ್ತಿದ್ದ ರವಿಶಂಕರ್ ಅವರಿಗೆ ಪೋನ್ ನೀಡಿ ನಮ್ಮನ್ನು ತೆಪ್ಪಗೆ ಇರಲು ಸೂಚಿಸಿದರು. ಇವೆಲ್ಲ ನೋವುಗಳ ಮಧ್ಯೆ ನಮ್ಮ ಕಾರ್ಯಕರ್ತರ ಜೊತೆ ಸೇರಿ ಪಕ್ಷದ ಕೆಲಸ ಮಾಡಿದ್ದೇವೆ.  ಲೋಪ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳದೆ ನಮ್ಮಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು.

ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಎನ್.ಸಿ.ಪ್ರಕಾಶ್ ಮಾತನಾಡಿ ಕಾರ್ಯಕರ್ತರಿಗೆ ಅಭಿನಂದನೆ ಹೆಸರಿನಲ್ಲಿ ನಮ್ಮನ್ನು ನಿಂದಿಸುವ ಕಾರ್ಯಕ್ರಮ ಮಾಡಿದ ಬಿಜೆಪಿ ಅಭ್ಯರ್ಥಿ ದಿಲೀಪ್ ಕುಮಾರ್ ಅವರು ಈ ಹಿಂದೆ ನಿಟ್ಟೂರು ಜಿಪಂ ಚುನಾವಣೆಯಲ್ಲಿ ಸಾಗರನಹಳ್ಳಿ ವಿಜಯ್ ಕುಮಾರ್ ಅವರನ್ನು ಸೋಲಿಸಲು ಮುಂದಾದ ನಿಮ್ಮಲ್ಲಿ ಪಕ್ಷ ನಿಷ್ಠೆ ಇದೆಯೇ ಎಂದು ಯೋಚಿಸಿ ಎಂದರು.

ಈ ಸಭೆಯಲ್ಲಿ ಹಿರಿಯ ಮುಖಂಡ ಎಸ್. ನಂಜೇಗೌಡ, ನರಸೇಗೌಡ, ಪಪಂ ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ಶಶಿಕುಮಾರ್, ರೈತ ಮೋರ್ಚಾ ಅಧ್ಯಕ್ಷ ಲೋಗನಾಥ್, ಎಸ್ಸಿ ಮೋರ್ಚಾ ಅಧ್ಯಕ್ಷ ರಾಜಣ್ಣ, ಸಿ.ಎಂ.ಹಿತೇಶ್ ಸೇರಿದಂತೆ ಕ್ಷೇತ್ರದ ಪ್ರಮುಖ ಮುಖಂಡರು ಭಾಗವಹಿಸಿದ್ದರು.

See also  ಶಂಕರಘಟ್ಟ:  ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು ಅಭಿನಂದನಾ ಸಮಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು