ತುಮಕೂರು: ಗ್ರಾಮಾಂತರದ ಹೆಬ್ಬೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಡಿ.ಸಿ.ಗೌರಿಶಂಕರ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ರೋಡ್ಶೋ ಕಾರ್ಯಕ್ರಮ ಮುಗಿಸಿ ಗೌರಿಶಂಕರ್ ಅವರು ತೆರೆದ ವಾಹನದಲ್ಲಿ ಬೈಕ್ ರ್ಯಾಲಿ ಮೂಲಕ ಊರ್ಡಿಗೆರೆಗೆ ತೆರಳುವಾಗ ಬಾಣಾವರ ಗೇಟ್ ಸಮೀಪವಿರುವ ಬಿಜೆಪಿ ಅಭ್ಯರ್ಥಿ ಬಿ. ಸುರೇಶ್ಗೌಡರ ಕಚೇರಿ ಶಕ್ತಿಸೌಧ ಮುಂಭಾಗಕ್ಕೆ ಆಗಮಿಸಿದಾಗ ಜೆಡಿಎಸ್ ಕಾರ್ಯಕರ್ತರು ಡಿ.ಸಿ.ಗೌರಿಶಂಕರ್ ಪರ ಜೈಕಾರ ಕೂಗುತ್ತಾ ಸುರೇಶ್ಗೌಡರ ಕಚೇರಿ ಮುಂಭಾಗ ನಿಂತಾಗ, ಶಕ್ತಿಸೌಧ ಕಚೇರಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ಗೇಟಿನ ಮುಂಭಾಗ ಆಗಮಿಸಿ ಸುರೇಶ್ಗೌಡರ ಪರ ಘೋಷಣೆ ಕೂಗಿದರು.
ಸ್ವಲ್ಪ ಹೊತ್ತು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ನಂತರ ಪೊಲೀಸರ ಮಧ್ಯ ಪ್ರವೇಶ ಹಾಗೂ ಬಿಜೆಪಿ ಕಾರ್ಯಕರ್ತರು ಅವರ ಕಾರ್ಯಕರ್ತರನ್ನು ತಡೆದು ಶಕ್ತಿಸೌಧ ಕಾಂಪೌಂಡ್ ಒಳಗೆ ವಾಪಸ್ ಕರೆದುಕೊಂಡು ಹೋಗಿ ಗೇಟ್ ಮುಚ್ಚಲಾಯಿತು. ನಂತರ ರ್ಯಾಲಿಯು ಮುಂದೆ ಸಾಗಿದಾಗ ಪರಿಸ್ಥಿತಿ ತಿಳಿಯಾಯಿತು. ಜೆಡಿಎಸ್ ರ್ಯಾಲಿ ಗೂಳೂರಿನಲ್ಲಿ ಮುಕ್ತಾಯಗೊಂಡಿತು.