News Kannada
Thursday, June 01 2023
ತುಮಕೂರು

ತುಮಕೂರು: ಕೊರಟಗೆರೆಯಲ್ಲಿ ಮೇರಾ ಲೈಫ್ ಮೇರಾ ಸ್ವಚ್ಛ ನಗರ ಅಭಿಯಾನ

Photo Credit : News Kannada

ತುಮಕೂರು: ಸ್ವಚ್ಚ ಭಾರತ ಅಭಿಯಾನದ ಅಡಿ ಮೇ.20 ರಿಂದ ಜೂ.5 ರತನಕ ಮೇರಾ ಲೈಫ್ ಮೇರಾ ಸ್ವಚ್ಛ  ನಗರ್ ಕಾರ್ಯಕ್ರಮದ ಅಡಿ 6 ಬಗೆಯ ನವೀಕರಿಸಿ ಮರು ಬಳಕೆ ಮಾಡುವ ವಸ್ತು ಉತ್ತಾದನೆ ಕಡಿಮೆಗೊಳಿಸಲು ಸುಸ್ಥಿರ ಜೀವನ ಪದ್ದತಿ ಆಳವಡಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಉದ್ದೇಶದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೊರಟಗೆರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ತಿಳಿಸಿದ್ದಾರೆ.

ಅವರು ಕೊರಟಗೆರೆ ಪಟ್ಟಣ ಪಂಚಾಯಿತಿಯ ತಮ್ಮ ಕಛೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಚಚ್ಚ ಭಾರತ್ ಮಿಷನ್ ನಗರ 2.0 ಯೋಜನೆಯಡಿ ಹೆಚ್ಚಿನ ರೀತಿಯಲ್ಲಿ ಪರಿಣಾಮಬೀರುವ ಆಭಿಯಾನವನ್ನು ಪ್ರಾರಂಭಿಸಿದ್ದು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸೇರಿ ದಂತೆ ಆಟಿಕೆ ವಸ್ತಗಳು, ಬಳಸಿದ ಬಟ್ಟೆ, ದಿನ ಪತ್ರಿಕೆಗಳು, ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ಸ್ ವಸ್ತಗಳಂತಹ 6 ಬಗೆಯ ನವೀಕರಿಸಿ ಮರುಬಳಸಬಹುದಾದಂತಹ ವಸ್ತುಗಳನ್ನು ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಆಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ರಕ್ಷಿಸುವುದು ಲೈಫ್ ಮಿಷನ್‌ನ ಪ್ರಮುಖ ಉದ್ದೇಶವಾಗಿರುವ ಹಿನ್ನಲೆಯಲ್ಲಿ ಮೇರಾ ಸ್ವಚ್ಚ ಶೆಹರ್ ಯೋಜನೆಯ ನನ್ನ ಸ್ವಚ್ಚ ನಗರ ಕಾರ್ಯಕ್ರಮದಡಿ ಕಡಿಮೆಗೊಳಿಸುವುದು, ಮರುಬಳಕೆ ಮತ್ತು ಪುನರ್ ಬಳಕೆ (ಆರ್.ಆರ್.ಆರ್) ಕೇಂದ್ರವನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದ್ದು ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ ಅಥವಾ ಗುರುತಿಸಿರುವ ವಸ್ತು ಮರುಪಡೆಯುವ ಸೌಲಭ್ಯ ಕೇಂದ್ರವನ್ನು ಬಳಸಿ ಮೇರಿ ಮೇರಾ ಸ್ವಚ್ಚ ಶೆಹರ್ ಯೋಜನೆಯನ್ನು ಪಟ್ಟಣದಲ್ಲಿ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದ ತಿಳಿಸಿದರು.

ತ್ಯಾಜ್ಯಗಳ ಮರುಬಳಕೆ, ಪುನರ್ ಬಳಕೆ ಹಾಗೂ ಪುನರ್ ಬಳಕೆ ಉದ್ದೇಶದಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಸ್ತು ಮರು ಪಡೆಯುವ ಕೇಂದ್ರ ತೆರೆಯಲಾಗಿ ದ್ದು ಸಾರ್ವಜನಿಕರು. ಸಂಘ ಸಂಸ್ಥೆಗಳು ಸ್ವಚ್ಛ ತಾ ರಾಯಭಾರಿಗಳು, ಸ್ವಯಂ ಸೇವಕರು, ಎನ್.ಜಿ.ಓ ಗಳು ಭಾಗವಹಿಸಿ ಪ್ಲಾಸ್ಟಿಕ್, ಕ್ಯಾರಿ ಬ್ಯಾಗ್, ಆಟಿಕೆ, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್, ಬಳಸಿದ ಬಟ್ಟೆ, ದಿನಪತ್ರಿಕೆ, ಹಳೆ ಪುಸ್ತಕಗಳನ್ನು ಮೇಲ್ಕಂಡ ಕೇಂದ್ರಗಳಿಗೆ ನೀಡಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ ಪ.ಪಂ. ಮುಖ್ಯಾಧಿಕಾರಿಗಳು ಪಟ್ಟಣದ ಅಂಗಡಿಗಳು ಮತ್ತು ರಸ್ತೆ ಬದಿಯ ಕೊಳಿ ವ್ಯಾಪಾರಿಗಳು ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಪಟ್ಟಣದ ಸುವರ್ಣ ಮುಖಿ ನದಿಯಲ್ಲಿ ಸುರಿಯುತ್ತಿರುವುದು ಕಂಡು ಬಂದಿದ್ದು ತಕ್ಷಣ ಈ ಕ್ರಮವನ್ನು ಬಿಟ್ಟು ಸಮರ್ಪಕವಾಗಿ ಸೂಚಿಸಿರುವ ಕಸವಿಲೇವಾರಿ ಘಟಕದಲ್ಲಿಯೇ ಕಡ್ಡಾಯವಾಗಿ ತ್ಯಾಜ್ಯವನ್ನು ಹಾಕಬೇಕು ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೆ ನನ್ನ ಸ್ವಚ್ಛ  ನಗರ ಕಾರ್ಯಕ್ರಮದಡಿ ಆರ್,ಆರ್,ಆರ್ ಕೇಂದ್ರವನ್ನು ಸಹಾಯವಾಣಿ ಯೊಂದಿಗೆ ಸ್ವಯಂ ಸೇವಕರು, ಎನ್.ಜಿ.ಒ ಗಳೊಂದಿಗೆ ತೆರೆಯಲಾಗಿದ್ದು ಈ ಕೇಂದ್ರವು ಬೆಳಿಗ್ಗೆ 11 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದ ಮುಖ್ಯಾಧಿಕಾರಿ ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಸ್ವಚ್ಛ  ಭಾರತ ಅಭಿಯಾನದ ಅಡಿ ಮೇ.20 ರಿಂದ ಜೂ.5 ರವರೆಗೆ ತ್ಯಾಜ್ಯಗಳ ಮರು ಬಳಕೆ ಪುನರ್‌ಬಳಕೆ ಹಾಗೂ ಪುನರ್ ಬಳಕೆ ಉದ್ದೇಶಗಳನ್ನು ಜಾಗೃತಿ ಗೊಳಿಸಲು ಕಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜೂ.5 ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಕಾಳಿದಾಸ ಪ್ರೌಡಶಾಲಾ ಬಳಿಇರುವ ಸ್ಮಶಾನದಲ್ಲಿ ಸಸಿಗಳನ್ನು ನಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ.ಪಂ.ಆರೋಗ್ಯ ನಿರೀಕ್ಷಕ ಮಹಮದ್ ಹುಸೇನ್ ಉಪಸ್ಥಿತರಿದ್ದರು.

See also  ಧಾರವಾಡ: ಬೆಲ್ಲದ ಅವರಿಗೆ ವಿಶೇಷ ಉಡುಗೊರೆ, ಕೃತಜ್ಞತೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು