News Karnataka Kannada
Friday, March 29 2024
Cricket
ತುಮಕೂರು

ತುಮಕೂರು: ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ, ಆತಂಕದಲ್ಲಿ ಸಾರ್ವಜನಿಕರು

ಅಕ್ಕಿ ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್ ಯೋಜನೆಯಡಿ ಭಾರತ್ ಅಕ್ಕಿ ಯೋಜನೆಯನ್ನ ಮೊಬೈಲ್ ವ್ಯಾನ್‌ಗಳ ಮೂಲಕ ಕರ್ನಾಟಕ ರಾಜ್ಯದಲ್ಲಿ ಚಾಲನೆ ನೀಡಿತ್ತು. ಆದರೆ ಆರಂಭಿಕ ದಿನಗಳಲ್ಲೆ ಅಕ್ಕಿ ಸಿಗದೇ ಗ್ರಾಹಕರು ಕಂಗಾಲಾಗಿದ್ದಾರೆ.
Photo Credit : News Kannada

ತುಮಕೂರು: ಸಾರ್ವಜನಿಕರಿಗೆ ವಿತರಿಸಲಾಗುತ್ತಿರುವ ಪಡಿತರ ಅಕ್ಕಿಯಲ್ಲಿ ಕೃತಕ ಪ್ಲಾಸ್ಟಿಕ್ ಅಕ್ಕಿ ಬೆರಕೆಯಾಗುತ್ತಿದ್ದು, ಪಡಿತರ ಫಲಾನುಭವಿಗಳು ಆತಂಕಕ್ಕಿಡಾಗಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಪಡಿತರ ವಿತರಿಸಲು ತೆರೆದಿರುವ ಪಡಿತರ ಕೇಂದ್ರ ಹಾಗೂ ವಿಎಸ್ಎಸ್ ಸಹಾಭಾಗಿತ್ವದಲ್ಲಿ ಹೊಂದಿರುವ ಪಡಿತರ ಕೇಂದ್ರದಲ್ಲಿ ಸಾರ್ವಜನಿಕರಿಗೆ ಅಕ್ಕಿ ವಿತರಿಸಲಾಗುತ್ತಿದೆ. ಇತ್ತೀಚೆಗೆ ವಿತರಿಸಲಾಗುತ್ತಿರುವ ಅಕ್ಕಿಯಲ್ಲಿ ಕೃತಕವಾಗಿ ತಯಾರಿಸಿರುವ ಪ್ಲಾಸ್ಟಿಕ್ ಅಕ್ಕಿ ಬೆರಕೆಯಾಗಿರುವುದು ಕಂಡು ಬಂದಿದೆ.

ಅಕ್ಕಿಯೊಂದಿಗೆ ಪ್ಲಾಸ್ಟಿಕ್ ಬಳಸಿ ಅಕ್ಕಿಯನ್ನು ಕಲಬೆರಕೆ ಮಾಡುತ್ತಿರುವ ಜಾಲಗಳ ಪತ್ತೆಗೆ ಇಲಾಖೆ ಹಾಗೂ ಸರಕಾರ ವಿಫಲವಾಗಿದೆ. ಕಲಬೆರಕೆ ಅಕ್ಕಿ ವಿತರಣೆಯಿಂದ ಜಿಲ್ಲೆಯ ಪಡಿತರ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ.

ಪ್ರಕರಣ ಪತ್ತೆ: ತುಮಕೂರು ತಾಲೂಕಿನ ಕೆಸ್ತೂರು ಗ್ರಾಮದ ವಿಎಸ್ಎಸ್ ಕೇಂದ್ರದಲ್ಲಿ ವಿತರಿಸಲಾಗಿದ್ದ ಪಡಿತರ ಅಕ್ಕಿಯಲ್ಲಿ ಅಪಾರ ಪ್ರಮಾಣದ ಕೃತಕ ಪ್ಲಾಸ್ಟಿಕ್ ಅಕ್ಕಿ ದೊರೆತಿದೆ. ಕುಟುಂಬದ ಮಹಿಳೆಯರು ಪ್ಲಾಸ್ಟಿಕ್ ಅಕ್ಕಿ ವಿಂಗಡಿಸಿ ಸಾಮಾಜಿಕ ಜಾಲಾ ತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು