News Karnataka Kannada
Thursday, April 25 2024
Cricket
ಬೀದರ್

ಬೀದರ್: ಮೀನಕೇರಾ ಕ್ರಾಸ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 262 ಕೆ.ಜಿ ಗಾಂಜಾ ವಶಕ್ಕೆ

Industrialist's suicide case: Main accused arrested
Photo Credit :

ಬೀದರ್‌: ತಾಲ್ಲೂಕಿನ ಬಗದಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮೀನಕೇರಾ ಕ್ರಾಸ್ ಬಳಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳನ್ನು ಅಡ್ಡಗಟ್ಟಿರುವ ಪೊಲೀಸರು ಬರೋಬ್ಬರಿ 262 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಅಂದಾಜು 26.20 ಲಕ್ಷ ಮೌಲ್ಯದ ಗಾಂಜಾ, ಟಾಟಾ ಗೂಡ್ಸ್ ವಾಹನ, ಮೊಬೈಲ್, ರೂ. 500 ನಗದು ವಶಕ್ಕೆ ಪಡೆದು ಆರೋಪಿಗಳಾದ ರುಸ್ತುಮ್ ಅಲಿಯಾಸ್ ಖಾಲೀದ್ ಮುಜಫರ್ ಖಾನ್ ಮು. ಶಾಮರಾಜಪುರ, ಭಾಲ್ಕಿ ತಾಲ್ಲೂಕಿನ ಮಾವಿನಹಳ್ಳಿಯ ಮೋಹನ್ ಕಾಶಿನಾಥ ಮೇತ್ರೆ ಎಂಬುವವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಡಿವೈಎಸ್ಪಿ ಕೆ.ಎಮ್ ಸತೀಶ ಅವರ ಮಾರ್ಗದರ್ಶನದಲ್ಲಿ ಬೀದರ ಗ್ರಾಮೀಣ ಸಿಪಿಐ ಶ್ರೀಕಾಂತ್ ಅಲ್ಲಾಪುರ ಬಗದಲ್ ಠಾಣೆ ಪಿಎಸ್ಐ ಸಂಗೀತಾ, ಎಎಸ್ ಐ ಅಶೋಕ ಕೋಟೆ, ವಿಲಾಸ್, ಸಿಬ್ಬಂದಿಯಾದ ರವಿಕಾಂತ, ಸುನೀಲ ಧಿಮಾಕೆ, ಸುನೀಲ ರಾಜ್, ಅಶೋಕ ಕೋಟೆ, ಶಿವಕುಮಾರ್, ಮಕ್ಸೂದ್, ಶರಣಯ್ಯ ಸ್ವಾಮಿ ಪ್ರಶಾಂತ, ವಾಹನ ಚಾಲಕ ಸಂಜುಕುಮಾರ್ ಪಾಲ್ಗೊಂಡಿದ್ದರು.

ಕಾರ್ಯಾಚರಣೆ ನಡೆಸಿ ಗಾಂಜಾ ವಶಪಡಿಸಿಕೊಂಡಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ ಬಾಬು ಶ್ಲಾಘಿಸಿದ್ದಾರೆ. ಈ ಕುರಿತು ಬಗದಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು