News Kannada
Monday, September 25 2023
ಬೀದರ್

ಬೀದರ್ ನಲ್ಲಿ ವಾರದಿಂದ ಭೂಮಿಯೊಳಗಿಂದ ಕೇಳಿಬರುತ್ತಿದೆ ಶಬ್ದ: ಜನರಲ್ಲಿ ಆತಂಕ

NEW DELHI: An earthquake hits north India
Photo Credit : News Kannada

ಬೀದರ್: ಜಿಲ್ಲೆಯ ಹುಮ್ನಾಬಾದ್ ತಾಲೂಕಿನಲ್ಲಿರುವ ಐದು ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ಭೂಮಿ ಅಡಿಯಿಂದ ಕೇಳಿಬರುವ ಶಬ್ದದಿಂದಾಗಿ ಜನರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ.

ಒಂದು ಶಬ್ದ ಕೇಳಿಬಂದರೆ ಸಾಕು ಭೂಕಂಪನವೆಂದು ಭಾವಿಸಿ ಮನೆಯೊಳಗಿದ್ದ ಜನರೆಲ್ಲರೂ ಹೊರಗೆ ಓಡಿ ಬರುತ್ತಿದ್ದಾರೆ. ಈ ನಡುವೆ ಸಂಭವಿಸಿದ ಭೂಕಂಪನ ದಿಂದಾಗಿ ಶ್ರೀಕಟನಳ್ಳಿ, ಹಿಲಾಲಪುರ, ವಡ್ಡನಕೇರಾ, ಸಕ್ಕರಗಂಜ್, ಮದರಗಾಂವ ಗ್ರಾಮಗಳಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ. ಭೂಮಿ ನಡುಗುವಂತಾದಾಗ ಜನರ ಮನೆಯಿಂದ ಹೊರ ಓಡಿಬರುತ್ತಿದ್ದಾರೆ. ಭೀತಿಗೊಳಗಾಗಿರುವ ಜನರನ್ನು ಭೇಟಿಯಾದ ಅಧಿಕಾರಿಗಳ ತಂಡ ಧೈರ್ಯ ತುಂಬುವ ಕೆಲಸ ಮಾಡಿದೆ.

ಹುಮ್ನಾಬಾದ್ ತಾಲೂಕಿನಲ್ಲಿರುವ ಶ್ರೀಕಟನಳ್ಳಿ, ಹಿಲಾಲಪುರ, ವಡ್ಡನಕೇರಾ, ಸಕ್ಕರಗಂಜ್, ಮದರಗಾಂವ ಗ್ರಾಮಗಳಲ್ಲಿ ಎರಡು ದಿನದ ಹಿಂದೆ 3.5 ತೀವ್ರತೆಯ ಭೂಕಂಪನವಾಗಿದ್ದು, ಭೂಮಿಯ 5 ಕಿಲೋಮೀಟರ್ ಆಳದಲ್ಲಿ ಭೂಕಂಪವಾಗಿದೆ ಎಂದು ಭೂ ವಿಜ್ಜಾನ ಇಲಾಖೆಯ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ

See also  ಮಡಿಕೇರಿ: ಧರ್ಮಗುರುವಿನ ಮೇಲೆ ಹಲ್ಲೆ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಖಂಡನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು