News Kannada
Wednesday, October 04 2023
ಬೀದರ್

ಬೀದರ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ-ಸಚಿವ ಪ್ರಭು ಬಿ.ಚವ್ಹಾಣ

BIDAR 2
Photo Credit : News Kannada

ಬೀದರ :  ಬೀದರ ಉತ್ಸವದ ಉದ್ಘಾಟನೆ ಕಾರ್ಯಕ್ರಮ ನಿನ್ನೆ ಅದ್ದೂರಿಯಾಗಿ ನಡೆಯಿತು ಈ ಉತ್ಸವವು ಪ್ರತಿ ವರ್ಷ ಆಚರಿಸಬೇಕೆಂದು ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ ಹೇಳಿದರು.

ಅವರು ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ, ಬೀದರ ಉತ್ಸವ-2023ರ ಅಂಗವಾಗಿ ಬೀದರ ಕೋಟೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಯಿಗಳು ನಿಯತ್ತಿಗೆ ಹೆಸರು ವಾಸಿಯಾಗಿದ್ದು ಅದು ಕೇವಲ ಮನೆ ಕಾಯುವುದು ಮಾತ್ರವಲ್ಲ ತನ್ನ ಯಜಮಾನನ ರಕ್ಷಣೆ ಮಾಡುತ್ತದೆ. ಜಾಕಿ ಶರೀಫ್ ಅವರ ಹಿಂದಿ ಚಲನಚಿತ್ರ ನೋಡಿದರೆ ಗೊತ್ತಾಗುತ್ತದೆ. ಮಾನವಿಯತೆಗೆ ಮತ್ತೊಂದು ಹೆಸರೇ ನಾಯಿ, ಅದು ಅಷ್ಟೊಂದು ಪ್ರಮಾಣಿಕತೆಗೆ ಹೆಸರು ವಾಸಿಯಾಗಿದೆ, ಪಶು ಸಂಗೋಪನೆ ಇಲಾಖೆ ವತಿಯಿಂದ ಪ್ರಾಣಿಗಳಿಗೆ ರಾಜ್ಯದಲ್ಲಿ ಲಸಿಕೆಯನ್ನು ಹಾಕಲಾಗುತ್ತದೆ ಎಂದು ಹೇಳಿದರು.

ಬೀದರ ಉತ್ಸವದ ಹಲವಾರು ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿವೆ. ಜಿಲ್ಲಾಧಿಕಾರಿಗಳು ಮತ್ತು ಅವರ ತಂಡ ಒಳ್ಳೆಯ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಉತ್ಸವ ಯಶಸ್ವಿಯಾಗಿ ನಡೆಯುತ್ತಿದೆ. ಜಿಲೆಯ ಎಲ್ಲಾ ಜನರು ಈ ಉತ್ಸವದಲ್ಲಿ ಭಾಗವಹಿಸಿ ಇದರ ಆನಂದವನ್ನು ಕಣ್ಣ ತುಂಬಿಕೊಳ್ಳಬೇಕೆAದು ಹೇಳಿದರು.

ಬೀದರ ಶಾಸಕರಾದ ರಹೀಮ ಖಾನ್ ಅವರು ಮಾತನಾಡಿ, ಹಿಂದಿನ ಉತ್ಸವಕ್ಕಿಂತ ಈ ಉತ್ಸವದಲ್ಲಿ ಹಲವಾರು ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ನಾಯಿಗಳ ಬಗ್ಗೆ ನಾವು ಹಲವಾರು ಕಥೆಗಳನ್ನು ಕೇಳಿರುತ್ತೇವೆ ಅದು ತನ್ನ ಮಾಲೀಕನಿಗೆ ಜೀವನ ಪೂರ್ತಿ ನಿಯತ್ತಿನಿಂದ ಕೆಲಸ ಮಾಡುತ್ತದೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ತಳಿಯ 130 ಶ್ವಾನಗಳು ಭಾಗವಹಿಸಿದ್ದವು. ಈ ಶ್ವಾನ ಮೇಳದ ಉದ್ದೇಶ ಶ್ವಾನಗಳ ಪಾಲನೆ, ಪೋಷಣೆ ಮತ್ತು ಅವುಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ರೇಬಿಸ್ ಮಾರಕ ಕಾಯಿಲೆ ನಿರ್ವಹಣೆ ಕುರಿತಾಗಿರುತ್ತದೆ. ಈ ಪ್ರದರ್ಶನದಲ್ಲಿ ಭಾಗವಹಿಸಿದ ನಾಯಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ, ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ಧಿನ್ ಕಛೇರಿವಾಲೆ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು, ಪಶು ಪಾಲನೆ ಮತ್ತು ಪಶು ವೈದ್ಯ ಸೇವೆ ಇಲಾಖೆಯ ಉಪ ನಿರ್ದೇಶಕರಾದ ಡಾ.ನಂದಿಶ, ಪಾಲಿ ಕ್ಲಿನಿಕ್‌ನ ಉಪನಿರ್ದೇಶಕರಾದ ಡಾ.ರವೀಂದ್ರಕುಮಾರ, ವೆಟರ್ನರಿ ಕಾಲೇಜಿನ್ ಡೀನ್ ಡಾ.ದಿಲೀಪಕುಮಾರ, ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಸೇರಿದಂತೆ ಹಲವಾರು ಜನರು ಈ ಶ್ವಾನ ಮೇಳದಲ್ಲಿ ಭಾಗವಹಿಸಿದ್ದರು.

See also  ಬೀದರ್: ಮದರಸಾದಲ್ಲಿ ಪೂಜೆ ಸಲ್ಲಿಸಿದ ಹಿಂದೂ ಕಾರ್ಯಕರ್ತರು, ಕಟ್ಟೆಚ್ಚರ ವಹಿಸಿದ ಪೊಲೀಸರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು