News Kannada
Sunday, June 04 2023
ಸಾಂಡಲ್ ವುಡ್

ಬೀದರ್: ಸಹಕಾರ ಕ್ಷೇತ್ರಕ್ಕೆ ನಾಗಮಾರಪಳ್ಳಿ ಅವರ ಕೊಡುಗೆ ಮಹತ್ವದ್ದು- ಶಿವರಾಜಕುಮಾರ್ ಮೆಚ್ಚುಗೆ

Bidar: Nagamarapalli's contribution to co-operative sector is significant, says Shivarajkumar
Photo Credit : News Kannada

ಬೀದರ್: ದಿ. ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರು ಜಿಲ್ಲೆ ಹಾಗೂ ಸಹಕಾರ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಚಲನಚಿತ್ರ ನಟ ಶಿವರಾಜಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಪ್ರತಾಪನಗರದ ಡಿಸಿಸಿ ಬ್ಯಾಂಕ್‍ನ ಶಾರದಾ ತರಬೇತಿ ಕೇಂದ್ರಕ್ಕೆ ಪತ್ನಿ ಗೀತಾ ಅವರೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಸೂರ್ಯಕಾಂತ ನಾಗಮಾರಪಳ್ಳಿ ಅವರು ನನಗೆ ಸಹೋದರ ಇದ್ದ ಹಾಗೆ. ಅಪ್ಪುನ ಎಲ್ಲ ಗುಣಗಳು ಅವರಲ್ಲಿ ಇವೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಸಹಾರ್ದ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಎಲ್ಲ ಅಭ್ಯರ್ಥಿಗಳು ಸುಖಕರ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಅಣ್ಣನವರ ಕುಟುಂಬವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಪುನೀತ್ ರಾಜಕುಮಾರ ಅವರು ಹಿಂದೆ ನಮ್ಮ ಸಂಸ್ಥೆಗಳಿಗೆ ಭೇಟಿ ಕೊಟ್ಟಿದ್ದರು ಎಂದು ಸ್ಮರಿಸಿದರು.

ಇದೇ ವೇಳೆ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ವತಿಯಿಂದ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಶಿವರಾಜಕುಮಾರ ದಂಪತಿ ಹೊಲಿಗೆ ಯಂತ್ರ, ಸೀರೆ ಹಾಗೂ ಮೆಕಪ್ ಕಿಟ್‍ಗಳನ್ನು ವಿತರಿಸಿದರು.

ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸದಸ್ಯರಾದ ಶಿವಕುಮಾರ ಕಟ್ಟೆ, ಬಾಬುರಾವ್ ದಾನಿ, ಅಶೋಕ ಮಹಾಲಿಂಗ, ವಿಜಯಕುಮಾರ ಹೂಗಾರ, ಜುಬೇರ್ ದೈಮಿ, ಅಣ್ಣೆಪ್ಪ ಪಾಟೀಲ ಅವರು ಶಿವರಾಜಕುಮಾರ ದಂಪತಿಗೆ ಬೃಹತ್ ಹೂಮಾಲೆ ಹಾಕಿ ಗೌರವಿಸಿದರು.

ಮಾಜಿ ಶಾಸಕ ಅಶೋಕ ಖೇಣಿ, ಭೀಮರಾವ್, ಪಾಟೀಲ ಡಿಗ್ಗಿ, ಮಾಧವರಾವ್ ಪಾಟೀಲ, ಜಿ.ಎನ್. ಸಹಕಾರ ಆಸ್ಪತ್ರೆಯ ನಿರ್ದೇಶಕ ತರುಣ ನಾಗಮಾರಪಳ್ಳಿ ಇದ್ದರು

See also  ರಿಯಲ್ ಲೈಫ್ ನಲ್ಲಿ ಸಪ್ತಪದಿ ತುಳಿದ ನಟ ಯಶಸ್ ಸೂರ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು