News Kannada
Friday, March 31 2023

ಬೀದರ್

ಹುಮನಾಬಾದ್: ಮುಂದಿನ ದಿನಗಳಲ್ಲಿ ಬಸವತತ್ವ ಸರಕಾರ ಅಧಿಕಾರಕ್ಕೆ, ಸಿ.ಎಂ ಇಬ್ರಾಹಿಂ ಭರವಸೆ

Cm Ibrahim assures Basava tattva government to come to power in coming days
Photo Credit : News Kannada

ಹುಮನಾಬಾದ್: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ‌ ಬಸವತತ್ವ ಸರಕಾರ ಅಧಿಕಾರಕ್ಕೆ ಬರಲಿದ್ದು, ಬೇಡ ಜಂಗಮರಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಭರವಸೆ ನೀಡಿದರು.

ತಾಲೂಕಿನ ಹುಡಗಿ ಗ್ರಾಮದ ವಿರಕ್ತಮಠದ ನೂತನ ಶ್ರೀಗಳಾದ ಚನ್ನಮಲ್ಲದೇವರು ಅವರ‌ ನಿರಂಜನ ಪಟ್ಟಾಧಿಕಾರ ಮಹೋತ್ಸವದ ನಿಮಿತ್ಯ ಶುಕ್ರವಾರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಬೇಡ ಜಂಗಮರಿಗೆ ಮೀಸಲಾತಿ ನೀಡದಿದ್ದರೂ ಕೂಡ ಅವರಿಗಾಗಿ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿ, ರಾಜಕೀಯವಾಗಿ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ಕಾರ್ಯ ಬಸವತತ್ವ ಸರ್ಕಾರ ಮಾಡುತ್ತದೆ. ಜಂಗಮರಿಗೆ ಊಟ, ವಸತಿ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕಿದೆ ಎಂದ ಅವರು, ರಾಜಕಾರಣಿಗಳು ದಾರಿ ತಪ್ಪಿದಾಗ ಅವರನ್ನು ತಿದ್ದಿ ಸರಿದಾರಿಗೆ ತರುವ ಕೆಲಸ ಮಠಗಳು ಮಾಡಬೇಕು ಎಂದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ ಬಸವ ತತ್ವದ ಸರ್ಕಾರ ಅಧಿಕಾರ ನಡೆಸುವುದ್ದು ಪಕ್ಕಾ ಎಂದ ಅವರು, ಹುಮನಾಬಾದ ಕ್ಷೇತ್ರದಿಂದ ಮಗ ಸಿ.ಎಂ. ಫೈಜ್ ಅವರನ್ನು ಇಲ್ಲಿನ ಶ್ರೀಗಳ ಹಾಗೂ ಕ್ಷೇತ್ರದ ಜನರ ಮಡಿಲಿಗೆ ಹಾಕಿದ್ದೇನೆ ಎಂದು ಭಾವುಕರಾಗಿ ಹೇಳಿದರು.

ಈ ಸಂದರ್ಭದಲ್ಲಿ ವಿರಕ್ತಮಠದ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಮಠಗಳ ಮಠಾಧೀಶರು, ಜೆಡಿಎಸ್ ಮುಖಂಡ ಸುರೇಶ ಸೀಗಿ, ಜೆಡಿಎಸ್ ಅಭ್ಯರ್ಥಿ ಸಿ.ಎಂ.ಫೈಜ್, ತಾಲೂಕು ಅಧ್ಯಕ್ಷ ಗೌತಮ ಸಾಗರ, ಶಿವಪುತ್ರ ಮಾಳಗೆ, ಬಿಜೆಪಿ ಮುಖಂಡ ಸೋಮನಾಥ ಪಾಟೀಲ ಇದ್ದರು.

See also  ಬೀದರ್: ಕ್ಯಾನ್ಸರ ಕುರಿತು ಅರಿವು ಮೂಡಿಸುವ ಬೃಹತ್ ಜಾಥಕ್ಕೆ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು