News Kannada
Wednesday, March 22 2023

ಬೀದರ್

ಲೋಕ ಅದಾಲತ್ : ಎಂಟು ವರ್ಷದ ಬಳಿಕ ಒಂದಾದ ದಂಪತಿ

Couple reunites after eight years
Photo Credit : News Kannada

ಬೀದರ್: ಇಲ್ಲಿಯ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಎಂಟು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದ ಕೊಟಗ್ಯಾಳ ಗ್ರಾಮದ ದಂಪತಿ ಒಂದಾದರು.

ಕಮಲನಗರ ತಾಲ್ಲೂಕಿನ ಕೊಟಗ್ಯಾಳ ಗ್ರಾಮದ ರಾಜೆಂದ್ರಬಾಬು ಸೋಪಾನ (40), ಪೂಜಾ ರಾಜೇಂದ್ರಬಾಬು (35) ಒಂದಾದ ದಂಪತಿ.

ಇವರಿಗೆ 12 ಹಾಗೂ 10 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಕಾರಣಾಂತರಗಳಿಂದ ಈ ದಂಪತಿ ಎಂಟು ವರ್ಷಗಳಿಂದ ಪ್ರತ್ಯೇಕವಾಗಿದ್ದರು. ‘ಹೆಂಡತಿ ಪೂಜಾ ಏಳು ವರ್ಷಗಳಿಂದ ನನ್ನನ್ನು ಬಿಟ್ಟು ತವರೂರು ಹಂದಿಕೇರಾದಲ್ಲಿ ವಾಸವಾಗಿದ್ದಾರೆ. ಹೀಗಾಗಿ ನನಗೆ ಅವಳಿಂದ ವಿಚ್ಛೇದನ ಕೊಡಿಸಿ’ ಎಂದು ರಾಜೇಂದ್ರ ಕಳೆದ ವರ್ಷ ಇಲ್ಲಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಶನಿವಾರ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ರವಿಬಾಬು ಚವಾಣ್ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಲಾಯಿತು. ದಂಪತಿ ಒಂದಾಗಲು ಒಪ್ಪಿಕೊಂಡು ಪರಸ್ಪರ ಹಾರ ಬದಲಾಯಿಸಿಕೊಂಡರು.

ಈ ರಾಜಿ ಸಂಧಾನದಲ್ಲಿ ವಕೀಲ ಅನಂತ ಹಾಗೂ ಎಂ.ಎಸ್. ಬುಟ್ಟೆ ವಾದಿಸಿದ್ದರು. ವಕೀಲ ವಿ.ಎಸ್.ಜಾಧವ, ಸುರೇಶ, ಎಸ್.ಎಂ.ಬೇಲೂರೆ, ಆರ್.ಪಿ.ಜಾಧವ ಹಾಗೂ ರಾಜಕುಮಾರ ಮಿತ್ರಾ ಇದ್ದರು.

See also  ವಿಜಯ ಸಂಕಲ್ಪ ಅಭಿಯಾನ ಯಶಸ್ವಿಗೊಳಿಸಿ: ಸಚಿವ ಪ್ರಭು ಚವ್ಹಾಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು