News Kannada
Monday, March 20 2023

ಬೀದರ್

ಔರಾದ ಬಸ್ ಡಿಪೋ ವಸತಿ ಗೃಹ ಕಾಮಗಾರಿ ನಿರ್ಲಕ್ಷ: ಲೋಕಾಯುಕ್ತಕ್ಕೆ ದೂರು

Complaint lodged with Lokayukta against neglect of bus depot quarters in Aurad
Photo Credit : News Kannada

ಔರಾದ: ಔರಾದ ಬಸ್ ಡಿಪೋ ವಸತಿ ಗೃಹ ಕಾಮಗಾರಿ ಪ್ರಾರಂಭಿಸುವಲ್ಲಿ ನಿರ್ಲಕ್ಷ ತೋರಿದ ಕಾರಣ ಕಲ್ಯಾಣ ಕರ್ನಾಟಕ ಸಾರಿಗೆ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಮ್. ರಾಚಪ್ಪ ಇವರ ವಿರುದ್ದ ಸಾಮಾಜ ಸೇವಕ ಗುರುನಾಥ ವಡ್ದೆ ಫೆ.24 ರಂದು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಔರಾದ ತಾಲೂಕಾ ಕೇಂದ್ರದಲ್ಲಿ ಇದ್ದ ಬಸ್ ಡಿಪೋ ನೌಕರರಿಗಾಗಿ ವಸತಿ ಗೃಹಗಳ ನಿರ್ಮಾಣಕ್ಕಾಗಿ ನಿಗಮದಿಂದ ದಿನಾಂಕ 31-01-2020 ರಂದು ರೂ.24067807 ಅನುದಾನ ನೀಡಿ, ಕಾಮಗಾರಿ ಪ್ರಾರಂಭಿಸಲು ಆದೇಶ ನೀಡಿರುತ್ತದೆ. ಆದರೆ ಇನ್ನೂವರೆಗೆ ಔರಾದನಲ್ಲಿ ಬಸ್ ಡಿಪೋ ವಸತಿ ಗೃಹಗಳ ಕಾಮಗಾರಿ ಪ್ರಾರಂಭ ವಾಗಿರುವುದಿಲ್ಲ. ಇದು ನಿಗಮದ ಕರ್ತವ್ಯ ನಿರ್ಲಕ್ಷತೆಯಾಗಿರುತ್ತದೆ.

ಆದ್ದರಿಂದ ತಕ್ಷಣ ವಸತಿ ಗೃಹಗಳ ಕಾಮಗಾರಿಗಳು ಪ್ರಾರಂಭಿಸಬೇಕು ಹಾಗೂ ಇದಕ್ಕೆ ವಿಳಂಬ ಮಾಡಿದ ನಿಗಮದ ವ್ಯವಸ್ಥಾಪಕ ಕರ್ತವ್ಯ ನಿರ್ಲಕ್ಷತೆ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸಮಾಜ ಸೇವಕ ಗುರುನಾಥ ವಡ್ಡೆಯವರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

See also  ಸಕಲೇಶಪುರ: ಇದ್ದು ಇಲ್ಲವಾಗಿರುವ ಲಕ್ಕುಂದ ಅಂಗನವಾಡಿ ಕೇಂದ್ರ...!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು