News Kannada
Sunday, September 24 2023
ಬೀದರ್

ಬೀದರ್‌ : ಸಚಿವರ ಮನೆಗೆ ಮುತ್ತಿಗೆ ಹಾಕಿದ್ದ ಕಾರಂಜಾ ಸಂತ್ರಸ್ತರು

Bidar: Karanja victims gherao minister's house
Photo Credit : News Kannada

ಬೀದರ್‌ : ಕಾರಂಜಾ ಸಂತ್ರಸ್ತರ 28 ಗ್ರಾಮಗಳ ಸಂತ್ರಸ್ತರು ಪ್ರಮುಖರು ಮತ್ತು ಮಹಿಳೆಯರು ಸೇರಿದಂತೆ ನೂರಾರು ಜನ ಕೇಂದ್ರ ಸಚಿವ ಭಗವಂತ ಖೂಬಾ ಅವರ ನಿವಾಸಕ್ಕೆ ಭೇಟಿ ನೀಡಿ ಸಂತ್ರಸ್ತರ ನ್ಯಾಯಯು ತವಾದ ಬೇಡಿಕೆ ಬಗ್ಗೆ ಮನವರಿಕೆ ಮಾಡಿದರು.

ಬಹುದಿನಗಳ ಕಾರಂಜಾ ಸಂತ್ರ ಸ್ಥರ ನ್ಯಾಯಯುತ ವಾದ ಬೇಡಿಕೆ ಈಡೇರಿಸುವುದರ ಬಗ್ಗೆ ಸಕಾರಾತ್ಮಕ ವಾಗಿ ಸ್ಪಂದಿಸುವದಾಗಿ ಸಂತ್ರಸ್ತರಿಗೆ ಭಗವಂತ ಖೂಬಾ ಅವರು ಭರವಸೆ ನೀಡಿದರು .

ಸುಮಾರು ಎಂಟು ತಿಂಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾರಂಜಾ ಸಂತ್ರಸ್ತರಿಗೆ ಮಾನವೀ ಯತೆ ಮಾನದಂಡದ ಆಧಾರದ ಮೇಲೆ ವೈಜ್ಞಾನಿಕ ರೀತಿಯ ಪರಿಹಾರ ನೀಡಬೇಕೆಂದು ಕಾರಂಜಾ ಮುಳು ಗಡೆ ಸಂತ್ರಸ್ತರ ಹಿತರಕ್ಷಣ ಸಮಿತಿ ವತಿಯಿಂದ ಅಹೋರಾತ್ರಿ ಧರಣಿ ನಡೆಸಿಕೊಂಡು ಬರಲಾಗುತ್ತಿದೆ .

ಅಷ್ಟೇ ಅಲ್ಲದೆ ಎಲ್ಲಾ ಪಕ್ಷಗಳ ಸಂಘ ಸಂಸ್ಥೆ ಮತ್ತು ಸಂಘಟನೆಗಳಿಂ ದ ಮಾನವ ಸರಪಳಿ ಹೋರಾಟ ಮತ್ತು ಭಾರಿ ಪ್ರಮಾಣದ ವಾಹನ ಗಳ ಜಾಥಾ ನಡೆಸಿ ನ್ಯಾಯಯುತ ವಾದ ಬೇಡಿಕೆ ಈಡೇರಿಸಲು ಸರ್ಕಾ ರಕ್ಕೆ ಒತ್ತಾಯಿಸಲಾಗಿದೆ .

ಧೀರ್ಘ ಕಾಲದ ಹೋರಾಟದ ಸಂದರ್ಭದಲ್ಲಿ ಜಿಲ್ಲೆಯ ಸಂಸದರು ಮತ್ತು ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಸತ್ಯಾಗ್ರಹ ಸ್ಥಳಕ್ಕೆ ಗಮನದಲ್ಲಿ ಭೇಟಿ ನೀಡಿಲ್ಲ .

ಇದನ್ನು ಟ್ಟುಕೊಂಡು ಸಂತ್ರಸ್ತರ ನೂರಾರು ಜನರ ನಿಯೋಗ ಕೇಂದ್ರ ಸಚಿವರಿಗೆ ಭೇಟಿಯಾಗಿ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಿ ಕಾರಂಜಾ ಸಂತ್ರಸ್ಥರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಬದ್ಧತೆಯನ್ನು ಪ್ರದರ್ಶಿಸಲು ಮನ ವರಿಕೆ ಮಾಡಲಾಯಿತು . ಇದೇ ಸಂದರ್ಭದಲ್ಲಿ ಸಚಿವರಿಗೆ ಲಿಖಿತ ಮನವಿ ನೀಡಿ ಕಾಲಮಿತಿ ಯೊಳಗೆ ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಸಲು ಸಂತ್ರಸ್ತರ

ಹಿತರಕ್ಷಣ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಸೇರಿ ದಂತೆ ಪ್ರಮುಖ ಮುಖಂಡರು ಅವರಲ್ಲಿ ಮನವರಿಕೆ ಮಾಡಿದರು .

ರಾಜಕುಮಾರ್ ಕೋಸಂ , ಚಂದ್ರಕಾಂತ್ ಹಾಲಹಳ್ಳಿ , ಬಸವ ರಾಜ್ ಹಿಂದಾ , ರವೀಂದ್ರ ಪಾಟೀಲ್ , ಸಾಗರ್ ಖೇಣಿ , ಕಲ್ಯಾಣ ರಾವ್ ಚನಶೆಟ್ಟಿ , ಬಸವರಾಜ್ ಬಂಬಳಗಿ , ವೀರಯ್ಯಾ ಸ್ವಾಮಿ , ವೈಜ ನಾಥ್ ಭತಮುರಗಿ , ಮಾದಪ್ಪ ಸಂಗೋಳಗಿ ಮುಂತಾದವರು ಉಪ ಸ್ಥಿತರಿದ್ದರು .

See also  ಔರಾದ: ಎಚ್‌ಐವಿ/ಏಡ್ಸ್‌ ಬಗ್ಗೆ ಅರಿವು ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು