News Kannada
Thursday, June 01 2023
ಬೀದರ್

ಯೂಟ್ಯೂಬ್‌ನಲ್ಲಿ ಹಾವು ಹಿಡಿಯುವುದನ್ನು ಕಲಿತ ಉರಗ ರಕ್ಷಕ ಚಂದ್ರಕಾಂತ ವಾಡೆ

Chandrakant Wade of Chalakapura, the protector of the reptile
Photo Credit : News Kannada

ಬೀದರ್: ಸಾಮಾನ್ಯವಾಗಿ ಹಾವು ಬಂತೆಂದರೆ ಸಾಕು ಎಲ್ಲರೂ ದೂರ ಸರಿಯುವವರೇ ಹೆಚ್ಚು. ಆದರೆ ಯುವಕ ಚಂದ್ರಕಾಂತ ವಾಡೆ ಹಾವು ಕಂಡು ಬಂತೆಂದರೆ ಸಾಕು ಅದು ಇದ್ದಲ್ಲಿಗೆ ಹೋಗಿ ಅದನ್ನು ಹಿಡಿದು ಕಾಡಿಗೆ ಬಿಡುವ ಕಾಯಕದಲ್ಲಿ ತೊಡಗಿದ್ದಾರೆ.

ಸಮೀಪದ ಚಳಕಾಪುರ ಗ್ರಾಮದ ಯುವಕ ಚಂದ್ರಕಾಂತ ವಾಡೆ ಚಾಣಾಕ್ಷತೆಯಿಂದ ಹಾವು ಹಿಡಿಯುವ ಸಾಹಸಿಯಾಗಿ ಗುರುತಿಸಿಕೊಂಡಿದ್ದು, ಐಟಿಐ ವಿದ್ಯಾಭ್ಯಾಸ ಮುಗಿಸಿರುವ ಅವರು ಗ್ರಾಮದಲ್ಲಿಯೇ ತೆಂಗಿನಕಾಯಿ ಅಂಗಡಿ ಇಟ್ಟುಕೊಂಡಿದ್ದಾರೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಚಂದು, ಹಾವನ್ನು ಹಿಡಿಯುವುದನ್ನು ಪ್ರವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಹಾವನ್ನು ತೊಂದರೆಯಾಗದಂತೆ ಹಿಡಿದು ಸಮೀಪದ ಕಾಡಿಗೆ ಬಿಟ್ಟು ಬರುತ್ತಾರೆ.

ಈವರೆಗೆ ಸುಮಾರು ಹಾವುಗಳನ್ನು ಹಿಡಿದು ಮೈಲಾರನ ಕಾಡಿಗೆ ಬಿಟ್ಟಿದ್ದೇನೆ. ನಾಗರಹಾವು, ಕೊಳಕ ಮಂಡಲ, ನೀರು ಹಾವು, ಹಸಿರು ಹಾವು ಇತ್ಯಾದಿ 8-10 ಜಾತಿಯ ಹಾವುಗಳನ್ನು ಹಿಡಿದಿದ್ದೇನೆ ಎನ್ನುತ್ತಾರೆ ಚಂದು.

ಹಾವು ಕಂಡರೆ ಸಾಕು ಬರಿ ಕೈಯಿಂದಲೇ ಅದರ ಬಾಲ ಹಿಡಿದು ಅದನ್ನು ಚೀಲಕ್ಕೆ ಹಾಕುತ್ತಾರೆ. ಹಾವು ಬಂದಿದೆ ಎಂದು ಯಾರೇ ಕರೆ ಮಾಡಿದರೂ ಚಂದು ಬಿಡುವು ಮಾಡಿಕೊಂಡು ಸ್ಥಳಕ್ಕೆ ಧಾವಿಸಿ, ಹಾವನ್ನು ಹಿಡಿದು ಹಾವುಗಳನ್ನು ಸಾಯಿಸದೇ ಅವುಗಳಿಗೂ ಬದುಕುವ ಅವಕಾಶ ನೀಡಿ ಎಂದು ಜನರಲ್ಲಿ ತಿಳಿವಳಿಕೆ ನೀಡುತ್ತಾರೆ. ಹೀಗಾಗಿ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ‘ಸ್ನೇಕ್ ಚಂದು’ ಎಂದೇ ಪ್ರಖ್ಯಾತಿ ಹೊಂದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರೇವಣಸಿದ್ಧ ಜಾಡರ್ ತಿಳಿಸುತ್ತಾರೆ.

‘ನಾನು ಯೂಟ್ಯೂಬ್‌ನಲ್ಲಿ ಹಾವು ಹಿಡಿಯುವುದನ್ನು ಕಲಿತು ಈಗ ಪ್ರವೃತ್ತಿಯಾಗಿ ಮಾಡಿಕೊಂಡಿದ್ದೇನೆ. ಸದ್ಯಕ್ಕೆ ಹಾವು ಹಿಡಿಯಲು ಯಾರಿಂದಲೂ ಒಂದು ರೂಪಾಯಿ ಹಣ ಕೇಳುವುದಿಲ್ಲ. ಬದಲಾಗಿ ಅವರೇ ಖುಷಿಯಿಂದ ಕೊಡುತ್ತಾರೆ. ಮುಂದಿನ ದಿನಗಳಲ್ಲಿ ಹಾವು ಕಡಿತಕ್ಕೆ ಔಷಧ ಕಂಡುಹಿಡಿಯುವ ಬಗ್ಗೆ ಪ್ರಯತ್ನಿಸುತ್ತಿರುವೆ’ ಎಂದು ಹೇಳುತ್ತಾರೆ ಚಂದ್ರಕಾಂತ ವಾಡೆ.

See also  ಔರಾದ: ಪ್ರಧಾನಿಯವರಿಂದ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ- ಪ್ರಭು ಚವ್ಹಾಣ ಹರ್ಷ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು