News Kannada
Tuesday, June 06 2023
ಬೀದರ್

ಬೀದರ್‌: ಅಬಕಾರಿ ದಾಳಿ, 1.44 ಲಕ್ಷ ಮೌಲ್ಯದ ಮದ್ಯ ವಶ

Liquor worth Rs 1.44 lakh seized in excise raid
Photo Credit : News Kannada

ಬೀದರ್‌: ಅಬಕಾರಿ ಇಲಾಖೆಯ ಸಿಬ್ಬಂದಿ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ನಾಲ್ಕು ಪ್ರಕರಣಗಳಲ್ಲಿ ₹ 1,44,521 ಮೌಲ್ಯದ ಬಿಯರ್, ಕಲಬೆರಕೆ ಸೇಂದಿ ಹಾಗೂ ಎರಡು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೀದರ್‌ ನಗರದ ಚಿದ್ರಿ ಕ್ರಾಸ್‌ನಲ್ಲಿ ದ್ವಿಚಕ್ರವಾಹನದಲ್ಲಿ ಹೊರಟಿದ್ದ ಸೂರ್ಯಾಕಾಂತ ಸಂಪ್ರೆ ಎನ್ನವರನ್ನು ಬಂಧಿಸಿ ₹ 35,444 ಮೌಲ್ಯದ 60.120 ಲೀಟರ್‌ ಮದ್ಯ ಹಾಗೂ 23.400 ಲೀಟರ್‌ ಬಿಯರ್ ವಶಪಡಿಸಿಕೊಂಡಿದ್ದಾರೆ.

ಔರಾದ್ ಪಟ್ಟಣದಲ್ಲಿ ದ್ವಿಚಕ್ರವಾಹನ ಸವಾರರನ್ನು ತಡೆದು ಪರಿಶೀಲಿಸಿದಾಗ ಕಪ್ಪು ಬಣ್ಣದ 8 ಪ್ಲಾಸ್ಟಿಕ್ ಕವರ್‌ನಲ್ಲಿ ಕಲಬೆರಕೆ ಸೇಂದಿ ಪತ್ತೆಯಾಗಿದೆ. ಆರೋಪಿಗಳಾದ ಔರಾದ್‌ನ ಪ್ರಭು ವಿಶ್ವನಾಥ ಕೋಳಿ ಹಾಗೂ ಸಾಯಿನಾಥ ವೈಜಿನಾಥ ಉಪ್ಪರ ಎನ್ನುವರನ್ನು ಬಂಧಿಸಿ ಕಲಬೆರೆಕೆ ಸೇಂದಿ ವಶಪಡಿಸಿಕೊಳ್ಳಲಾಗಿದೆ.

ಬಸವಕಲ್ಯಾಣ ತಾಲ್ಲೂಕಿನ ಲಾಡವಂತಿ ಗ್ರಾಮದ ಜೈ ಭವಾನಿ ಚೈನಿಸ್ ಸೇಂಟರ್ ಮೇಲೆ ದಾಳಿ ನಡೆಸಿ ಅಬಕಾರಿ ಸಿಬ್ಬಂದಿ ₹ 19,982 ಮೌಲ್ಯದ 28.620 ಲೀ ಮದ್ಯ ಹಾಗೂ ₹ 2,595 ಮೌಲ್ಯದ ಬಿಯರ್ ವಶಪಡಿಸಿಕೊಂಡಿದ್ದಾರೆ. ಲಾಡವಂತಿಯ ನಾಗೇಂದ್ರ ವೆಂಕಟರಾವ್ ಪಾಟೀಲ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ರವೀಂದ್ರ ಪಾಟೀಲ್ ನಾನಾಗೌಡ ಪಾಟೀಲ, ದೌಲತ್ ರಾಯ್, ಸಿಬ್ಬಂದಿ ಧೋನಿ ಶೆಡ್ರಿಕ್ ಶಿವಶಂಕರ್ ವಿಷ್ಣುವರ್ಧನ್ ಭಾಗವಹಿಸಿದ್ದರು.

See also  ರೋಹ್ಟಕ್‌: ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ 4 ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು