News Kannada
Saturday, June 03 2023
ಬೀದರ್

ಔರಾದ: ಪ್ರತಿಕ್ ಚೌಹಾಣ್ ಗೆ ಮುತ್ತಿಗೆ ಹಾಕಿದ ವಡಗಾಂವ ದೇ ಗ್ರಾಮಸ್ಥರು

Villagers of Vadgaon Dey gherao Prateek Chauhan
Photo Credit : News Kannada

ಔರಾದ : ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಪ್ರಭು ಚೌಹಾಣ್ ಸುಪುತ್ರ ಪ್ರತೀಕ್ ಚೌಹಾಣ್ ಅವರಿಗೆ ಮುತ್ತಿಗೆ ಹಾಕಿದ ಘಟನೆ ಔರಾದ ತಾಲೂಕಿನ ವಡಗಾಂವ ದೇ ಗ್ರಾಮದಲ್ಲಿ ನಡೆದಿದೆ.

ಸಾರ್ವಜನಿಕರ ಭೇಟಿ ಹಾಗೂ ಔರಾದ ಕ್ಷೇತ್ರದ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಸಲಹೆ ಸ್ವೀಕರಿಸಲು ವಡಗಾಂವ ದೇ ಗ್ರಾಮಕ್ಕೆ ಆಗಮಿಸಿದಾಗ ಈ ಘಟನೆ ಜರುಗಿದೆ. ಜೆ.ಜೆ.ಎಮ್ ಕೆಲಸ ಆರಂಭವಾಗಿ ಸುಮಾರು ನಾಲ್ಕರಿಂದ ಐದು ತಿಂಗಳು ಕಳೆದಿವೆ. ಐದು ತಿಂಗಳಿಂದ ವಾರ್ಡ್ ನಂ.1 ರಲ್ಲಿ ಹನಿ ನೀರಿಲ್ಲದೆ ಜನರು ಪರದಾಡುತ್ತಿದ್ದೇವೆ. ಗ್ರಾಪಂ ಪಿಡಿಓ ಹಾಗೂ ಅಧ್ಯಕ್ಷ, ಸದಸ್ಯರಿಗೆ ನಮ್ಮ ಸಮಸ್ಯೆ ಹೇಳಿದರು ಯಾವುದೇ ಪ್ರಯೋಜನ ವಾಗಿಲ್ಲ, ಕೂಡಲೇ ನೀರಿನ ಸಮಸ್ಯೆ ಬಗೆಹರಿಸುವಂತೆ ಮಹಿಳೆಯರು ಆಕ್ರೋಶ ಹೊರಹಾಕಿದರು.

ಜನರ ಸಮಸ್ಯೆ ಕೇಳುವುದಕ್ಕಾಗಿ ನಾನು ಗ್ರಾಮ ಸಂಚಾರ ಮಾಡುತ್ತಿದ್ದೇನೆ. ಒಂದು ವಾರದಲ್ಲಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಪ್ರತೀಕ್ ಚೌಹಾಣ್ ಭರವಸೆ ನೀಡಿದರು. ಒಂದು ವಾರದಲ್ಲಿ ನಮ್ಮ ಗ್ರಾಮಕ್ಕೆ ನೀರು ಬರದಿದ್ದರೆ ನಿಮ್ಮ ಮನೆಗೆ ಬಂದು ಮುತ್ತಿಗೆ ಹಾಕುತ್ತೇವೆ ಎಂದು ಗ್ರಾಮದ ಮಹಿಳೆಯರು ಎಚ್ಚರಿಕೆ ನೀಡಿದರು.

See also  ಬೆಂಗಳೂರು: ಎಸ್.ಸಿ/ಎಸ್.ಟಿ ಗೆ ಸೇರ್ಪಡೆಗೊಳಿಸಲು ಇತರೆ ಸಮುದಾಯಗಳ ಒತ್ತಾಯ- ಸಿಎಂ ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು