News Kannada
Tuesday, June 06 2023
ಬೀದರ್

ಕೆ.ಕೆ.ಆರ್.ಡಿ.ಬಿ. ಭ್ರಷ್ಟಾಚಾರ: ಸಿ.ಬಿ.ಐ ತನಿಖೆಗೆ ವಡ್ಡೆ ಆಗ್ರಹ

KKRDB corruption: Vadde demands CBI probe
Photo Credit : News Kannada

ಔರಾದ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮ೦ಡಳಿ ಕಲಬುರಗಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಸಿ.ಬಿ.ಐ.ದಿಂದ ಸಮಗ್ರ ತನಿಖೆ ನಡೆಸಬೇಕೆಂದು ಸಮಾಜ ಸೇವಕ ಗುರುನಾಥ ವಡ್ಡೆಯವರು ಆಗ್ರಹಿಸಿದ್ದಾರೆ.

ಈ ಬಗ್ಗೆ ರಾಷ್ಟ್ರಪತಿಗಳು, ರಾಜ್ಯಪಾಲರು ಪ್ರಧಾನ ಮಂತ್ರಿಗಳು ಹಾಗೂ ಗೃಹ ಸಚಿವರು ಭಾರತ ಸರ್ಕಾರ ಇವರಿಗೆ ಬೀದರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿ. ಸಿ.ಬಿ.ಐ. ತನಿಖೆ ನಡೆಸಬೇಕೆಂದು ಕೋರಿದ್ದಾರೆ.

ಮಂಡಳಿಯ ಅನುದಾನದಲ್ಲಿನ ಕಾಮಗಾರಿಗಳಲ್ಲಿ ಹಾಗೂ ಮಂಡಳಿಯ ವತಿಯಿಂದ ನಡೆದ ಕಾಮಗಾರಿಗಳಲ್ಲಿ ಕಾಮಗಾರಿಯ ಅಂದಾಜು ಪತ್ರಿಕೆ ತಯಾರಿ- ಕೆ/ ಡಿ.ಪಿ.ಆರ್. ತಯಾರಿಕೆಯಿಂದ ಟೆಂಡರ್ ಪ್ರಕಟಣೆ ಹಾಗೂ ಟೆಂಡರ್ ನೀಡುವಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರ ಘೋಷಿಸಿದಷ್ಟು ಅನುದಾನ ನೀಡದೇ, ಸರ್ಕಾರವು ಅನ್ಯಾಯ ಮಾಡಿರುತ್ತದೆ. ನೀಡಿದ ಅನುದಾನ ಖರ್ಚು ಮಾಡದೇ ಮಂಡಳಿ ಭ್ರಷ್ಟಾಚಾರ ಮಾಡಿರುತ್ತದೆ. ಮಂಡಳಿಯ ಕಾಮಗಾರಿಗಳು ವಿಳಂಬ ಆಗುತ್ತಿರುವುದು, ಕಳಪೆ ಕಾಮಗಾರಿ ಆಗುತ್ತಿರುವುದು, ಟೆಂಡರ್ ಹಗರಣ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಂಡಳಿ ಸಭೆ ನಡೆಸುವಲ್ಲಿ ಕಾನೂನು ನಿಯಮಗಳ ಉಲ್ಲಂಘನೆ, ಆಡಿಟ್ ಮಾಡದಿರುವುದು.

ಡಾ. ನಂಜುಂಡಪ್ಪ ವರದಿ ಪಾಲನೆ ಮಾಡದಿರುವುದು, ಅನಗತ್ಯ ಅವೈಜ್ಞಾನಿಕ ಕಾಮಗಾರಿಗಳು ಮಂಜೂರು ಮಾಡುವುದು ಈ ರೀತಿಯಾಗಿ ಎಲ್ಲ ಸ್ಥರದಲ್ಲಿ ಅನ್ಯಾಯ, ಭ್ರಷ್ಟಾಚಾರ, ಅವ್ಯವಹಾರ ನಡೆಯುತ್ತಿದೆ. ಇದು ಮಂಡಳಿ ಸ್ಥಾಪಿಸುವ ಉದ್ದೇಶ ವಿಫಲವಾಗುತ್ತಿದೆ. ಅದರಿಂದ 2013- 14 ರಿಂದ 2022-23 ರ ವರೆಗಿನ ಕೆ.ಕೆ.ಆರ್.ಡಿ.ಬಿ.ಯ ಭ್ರಷ್ಟಾಚಾರವನ್ನು ಸಿ.ಬಿ.ಐ ಗೆ ಒಪ್ಪಿಸಿ ಸಮಗ್ರ ತನಿಖೆ ನಡೆಸಬೇಕೆಂದು ಗುರುನಾಥ ವಡ್ಡೆಯವರು ಆಗ್ರಹಿಸಿದ್ದಾರೆ.

See also  ಕರ್ನಾಟಕ ಐತಿಹಾಸಿಕ ತೀರ್ಥಕ್ಷೇತ್ರ – ಹಾಸನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು