News Kannada
Tuesday, June 06 2023
ಬೀದರ್

ಔರಾದ: ಕಾರ್ಮಿಕರ ತ್ಯಾಗ ಗೌರವಾರ್ಹ – ನವೀಲಕುಮಾರ ಉತ್ಕಾರ್

Sacrifice of workers is respectable - Navil Kumar Utkar
Photo Credit : News Kannada

ಔರಾದ: ದುಡಿಮೆಯೇ ದೇವರೆಂದು ಭಾವಿಸಿ, ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕರ ತ್ಯಾಗ ಗೌರವಕ್ಕೆ ಅರ್ಹವಾಗಿದೆ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹೇಳಿದರು.

ಸಂತಪುರ್ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಮಿಕರಿಂದಲೇ ದೇಶ ಸ್ವಚ್ಛ, ಸುಂದರ, ಸುರಕ್ಷಿತ ಮತ್ತು ಕಾರ್ಮಿಕರಿಲ್ಲದೇ ದೇಶದ ಪ್ರಗತಿ ಇಲ್ಲ. ಮಾಲೀಕನ ಮಟ್ಟಕ್ಕೆ ಬೆಳೆಸಿದವರು ನಾನು ಬೆಳೆಯದಿದ್ದರೂ ತನ್ನ ಯಜಮಾನ ಬೆಳೆಯಲಿ ಎಂಬುವರೇ ಕಾರ್ಮಿಕರು ಎಂದ ಅವರು 12ನೇ ಶತಮಾನದ ಬಸವಾದಿ ಶರಣರು ಕಾಯಕವೇ ಕೈಲಾಸಕ್ಕೆ ಮಹತ್ವ ನೀಡಿ ಕೊಟ್ಟ ಕೊಡುಗೆ ಇಂದು ನಮಗೆ ಕಾರ್ಯನಿರತರಾಗಲು ಸಾಧ್ಯವಾಗಿದೆ. ಕೋವಿಡ್-19 ನಂತಹ ಪರಿಸ್ಥಿತಿಯಲ್ಲಿ ಕಾರ್ಮಿಕರ ಶ್ರಮ ಎಂದೆಂದಿಗೂ ಮರೆಯಲಾಗದು ಎಂದರು.

ಶಾಲಾ ಕಾಲೇಜಿನ ಡ್ರೈವರ್ ಕಾರ್ಮಿಕರುಗಳಾದ ಚೆನ್ನಪ್ಪ ವಾಲ್ದೊಡ್ಡೆ, ಸಂಗಯ್ಯ ಸ್ವಾಮಿ, ಸಂಗಶೆಟ್ಟಿ ಗಂದಿಗುಡೆ, ಶಿವಶಂಕರ್ ಸಾವಳೆ, ಸೋಮನಾಥ್ ಬಿರಾದರ್. ಸ್ವಚ್ಛತಾ ಕಾರ್ಮಿಕರುಗಳಾದ ಅಂಬಾಬಾಯಿ ಟೆಳೇಕರ್, ಶಿವಮಂಗಲಾ ಲಕ್ಕೆ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಸುಧಾ ಕೌಟಿಗೆ, ಅಂಬಿಕಾ ವಿಶ್ವಕರ್ಮ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ, ಸುರೇಖಾ ದಡ್ಡೆ ಇತರರಿದ್ದರು.

See also  ಔರಾದ: ಸಚಿವ ಪ್ರಭು.ಬಿ ಚವ್ಹಾಣರಿಂದ ಬೆಳೆ ಹಾನಿ ವೀಕ್ಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು