ಬೀದರ್: ಬೀದರ್ ಜನತೆಯ ಮಹಾದಾಸೆಯಂತೆ, ಬೀದರ್-ಬೆಂಗಳೂರು ನಾಗರಿಕ ವಿಮಾನಯಾನ ಸೇವೆಯ ಸಮಯ ಬದಲಾವಣೆ ಮಾಡಿಸಿದ್ದೇನೆ. ಎಲ್ಲಾ ಜನರು ಈ ಸಮಯ ಬದಲಾವಣೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಜನರಲ್ಲಿ ಕೋರಿದ್ದಾರೆ.
ಸದ್ಯ ಬೀದರ್ನಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಂಗಳೂರಿನಿಂದ ಬೆಳಗ್ಗೆ 8.05 ಗಂಟೆಗೆ ಹೊರಟು ಬೆಳಗ್ಗೆ 9.15ಕ್ಕೆ ಬೀದರ್ ತಲುಪಲಿದೆ ಮತ್ತೆ ಬೆ. 9.40ಕ್ಕೆ ಬೀದರ್ನಿಂದ ಹೊರಟು ಬೆಳಗ್ಗೆ 10.45ಕ್ಕೆ ಬೆಂಗಳೂರು ತಲುಪಲಿದೆ.
ಉಳಿದ ನಾಲ್ಕು ದಿನಗಳು ಮಂಗಳವಾರ, ಗುರುವಾರ, ಶನಿವಾರ ಮತ್ತು ರವಿವಾರದಂದು ಎಂದಿನಂತೆ ಸಾಯಂಕಾಲ 4.20ಕ್ಕೆ ಬಂದು ಸಾ. 4.45ಕೆ ಹೊರಟು ಸಾ. 5.50ಕ್ಕೆ ಬೆಂಗಳೂರು ತಲುಪಲಿದೆ ಎಂದು ತಿಳಿಸಿದ್ದಾರೆ.
ಆದಷ್ಟು ಬೇಗ ವಾರಪೂರ್ತಿ ಬೆಳಿಗ್ಗೆ ಹೊರಡುವ ಹಾಗೆ ವ್ಯವಸ್ಥೆ ಮಾಡುತ್ತೇನೆ ಮತ್ತು ಬೀದರ್ನಿಂದ ದೇಶದ ಬೇರೆ ನಗರಗಳಿಗೆ ವಿಮಾನಯಾನ ಸೇವೆ ಪ್ರಾರಂಭಿಸುವ ನಿಟ್ಟಿನಲ್ಲಿ ಈಗಾಗಲೆ ಬೇರೆ ಬೇರೆ ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದೆ, ಶೀಘ್ರದಲ್ಲಿ ಬೀದರ್ನಿಂದ ಹೊಸ ವಿಮಾನಯಾನ ಸೇವೆಯೂ ಜನತೆಗೆ ಲಭ್ಯವಾಗಲಿದೆ ಎಂದು ಸಚಿವರು ಜನತೆಗೆ ತಿಳಿಸಿದ್ದಾರೆ.