News Karnataka Kannada
Thursday, March 28 2024
Cricket
ಬೀದರ್

ಬೀದರ್: ಅಭಿವೃದ್ಧಿಗಾಗಿ ನನ್ನ ಸ್ಪರ್ಧೆ ಎಂದ ಚಂದ್ರಾಸಿಂಗ

Bidar: Chandra Singh says he is contesting for development
Photo Credit : News Kannada

ಬೀದರ್:  ಬೀದರ ದಕ್ಷಿಣ ಕ್ಷೇತ್ರ ಅಭಿವೃದ್ಧಿಯಿಂದ ಹಿಂದುಳಿದಿದೆ. ಕ್ಷೇತ್ರದ ಅಭಿವೃದ್ಧಿಯ ಒಂದೇ ಉದ್ದೇಶ ಇಟ್ಟುಕೊಂಡು ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೇನೆ. ಕ್ರಮ ಸಂಖ್ಯೆ 9ರ ವಿದ್ಯುತ ಕಂಬಕ್ಕೆ ಮತ ನೀಡಿ.

ನನ್ನ ಮೇಲೆ ನಿಮ್ಮ ಎಲ್ಲರ ಆಶೀರ್ವಾದ ಇರಲಿ ಎಂದು ಪಕ್ಷೇತರ ಅಭ್ಯರ್ತಿ ಚಂದ್ರಾಸಿಂಗ ಮನವಿ ಮಾಡಿದರು.
ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಮಠಾಣಾ, ಮಂದಕನ್ನಳ್ಳಿ, ಕಂಗನಕೋಟ, ಕಪಲಾಪುರ, ಚೊಂಡಿ, ಅತಿವಾಳ, ಹೊನ್ನಿಕೇರಿ ಗ್ರಾಮಗಳಲ್ಲಿ ಮತಯಾಚನೆ ನಡೆಸಿದ ಚಂದ್ರಸಿಂಗ್ ಅವರು ಮತ ನೀಡುವಂತೆ ಜನರಲ್ಲಿ ಕೋರಿದರು. ನಿಮ್ಮ ಒಂದೊಂದು ಮತವು ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಲಿವೆ ಎಂದು ಅವರು ಮನವಿ ಮಾಡಿದರು.

ಕಮಠಾಣಾ. ಮಂದಕನಳ್ಳಿ ಸೇರಿದಂತೆ ಹಲವೆಡೆ ಬ್ಯಾಂಡ. ಬಾಜಾದೊಂದಿಗೆ ಭವ್ಯವಾದ ಸ್ವಾಗತ ಕೋರಿದ ಗ್ರಮಸ್ಥರು ಚಂದ್ರಾಸಿಂಗ ಅವರಿಗೆ ಮತ ನೀಡುವ ಭರವಸೆ ನೀಡಿದರು. ಕಳೆದ 12 ವರ್ಷಗಳಿಂದ ನಮ್ಮ ಕಷ್ಟ. ಸುಖಗಳಲ್ಲಿ ನೀವು ಭಾಗಿಯಾಗಿದ್ದೀರಿ. ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ಮತದಾರರು ಭರವಸೆ ನೀಡಿದರು.

ಎಲ್ಲ ಗ್ರಾಮಗಳಲ್ಲಿ ಕಾರ್ಯಕರ್ತರು. ಅಭಿಮಾನಿಗಳು. ಗ್ರಾಮ ಪಂಚಾಯತ ಅಧ್ಯಕ್ಷರು. ಉಪಾಧ್ಯಕ್ಷರು. ಸದಸ್ಯರುಗಳು. ಗ್ರಾಮಸ್ಥರು. ಹಿತೈಷಿಗಳು ಅಪಾರ ಸಂಕ್ಯೆಯಲ್ಲಿ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು