ಬೀದರ್: ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ನೇರ ಹಣಾಹಣಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ವಿರುದ್ಧ ಕಾಂಗ್ರೆಸ್ನ ರಹೀಂ ಖಾನ್ 69165 ಮತಗಳನ್ನು ಗಳಿಸಿ ಗೆದ್ದಿದ್ದಾರೆ.
ಕಳೆದ ಚುನಾವಣೆ ನಂತರ ಕ್ಷೇತ್ರದ ಉದ್ದಗಲಕ್ಕೂ ಸರ್ಕಾರಿ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ, ಕೋವಿಡ್ನಲ್ಲಿ ಮನೆ ಮಾತಾಗಿದ್ದ ಸೂರ್ಯಕಾಂತ ನಾಗಮಾರಪಳ್ಳಿ ಅಲ್ಪಸಂಖ್ಯಾತರು ಮತ್ತು ಒಬಿಸಿ ಮತದಾರರ ಫೆವರೇಟ್ ಆಗಿದ್ದರು. ಆದರೆ ಮತದಾರ ಪ್ರಭುಗಳು ಮತ್ತೆ ಕಾಂಗ್ರೆಸ್ಗೆ ಜೈ ಎಂದಿದ್ದಾರೆ.
2018 ರಲ್ಲಿ ರಹೀಂ ಖಾನ್ ಅವರು ಕಾಂಗ್ರೆಸ್ನಿಂದ 73270 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದರು.