ಬೀದರ: ಚಿಟಗುಪ್ಪ ತಾಲೂಕಿನ ಚಾಂಗಲೇರಾ ವೀರಭದ್ರೇಶ್ವರ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಗುರುಲಿಂಗ ಶಿವಾಚಾರ್ಯರು, ಮರುಳಾರಾಧ್ಯ ಶಿವಾಚಾರ್ಯರು ಸನ್ಮಾನಿಸಿದರು.
ಚಿಟಗುಪ್ಪ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಜನರ ಸೇವೆಯೇ ನನ್ನ ಮೂಲ ಗುರಿಯಾಗಿದ್ದು ಈ ನಿಟ್ಟಿನಲ್ಲಿ ನಾನು ಸದಾ ಸಿದ್ಧನಿರುತ್ತೇನೆ ಮತ್ತು ಜನರ ಆಶೊತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡುವೆ ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ನುಡಿದರು.
ಸುಕ್ಷೇತ್ರ ಚಾಂಗಲೇರಾ ಗ್ರಾಮದ ಪುರಾಣ ಪ್ರಸಿದ್ಧ ವೀರಭದ್ರೇಶ್ವರ ಮಂದಿರದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು.
ಬೀದರ ದಕ್ಷಿಣ ಕ್ಷೇತ್ರವೂ ಹಳ್ಳಿಗಳಿರುವ ಕ್ಷೇತ್ರವಾಗಿದ್ದು ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ಸವಲತ್ತು, ಬಿದಿ ದೀಪಗಳು, ಚರಂಡಿಗಳು, ರಸ್ತೆ ಸೇರಿ ಇತ್ಯಾದಿ ಸೌಕರ್ಯಗಳನ್ನು ಒದಗಿಸುವ ಜತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಜನರ ಸಲಹೆ ಸೂಚನೆಗಳ್ನು ಪಡೆದುಕೊಂಡು ಮಾದರಿ ಕ್ಷೇತ್ರವನ್ನಾಗಿಸುವೆ ಎಂದರು.
ಚಿಟಗುಪ್ಪ ಅಯ್ಯಪ್ಪಸ್ವಾಮಿ ಹಿರೇಮಠದ ಹಿರಿಯ ಶ್ರೀ ಗುರುಲಿಂಗ ಶಿವಾಚಾರ್ಯರು ಆರ್ಶೀವಚನ ನೀಡುತ್ತಾ ಮಾತನಾಡಿ, ವೀರಭದ್ರೇಶ್ವರರ ಭಕ್ತರಾಗಿರುವ ತಾವು ಕ್ಷೇತ್ರದ ಜನರ ಮನಸ್ಸನ್ನು ಅರಿತುಕೊಂಡು ಸೇವೆಗೆ ಮುಂದಾಗಬೇಕು ಎಂದು ತಿಳಿಸಿ ಆರ್ಶೀವದಿಸಿದರು.
ಅಯ್ಯಪ್ಪಸ್ವಾಮಿ ಹಿರೇಮಠದ ಪೀಠಾಧಿಪತಿ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ, ಸದಾಕಾಲ ಜನರ ಸೇವೆಯನ್ನು ಮಾಡುವ ಮೂಲಕ ಸಮಾಜಪರ ಕಾಳಜಿ ಹೊಂದಿರುವ ನಾಯಕನಾಗಿರುವ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಒಳ್ಳೆಯದಾಗಲಿ ಎಂದರು.
ಪ್ರಮುಖರಾದ ಶಿವಕುಮಾರ ಸ್ವಾಮಿ ಬಂಬಳಗಿ, ನಾಗಭೂಷಣ ಕಮಠಾಣ, ಕುಶಲರಾವ ಯಾಬಾ, ವಿಜಯಕುಮಾರ ವಾಲಿ, ರಾಜಕುಮಾರ ಪಂಚಾಳ, ಪಪ್ಪು ಸ್ವಾಮಿ, ನರೇಶ ಥೊಂಟಿ, ಸಂತೋಷ ಹಳ್ಳಿಖೇಡ, ಬಸವರಾಜ ಚಟನಳ್ಳಿ, ವಿಕೆ ಪೂಜಾರಿ, ರಾಮಯ್ಯ ಶಾಸ್ತಿç ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿಯವರು, ನೂರಾರು ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.