News Karnataka Kannada
Tuesday, April 16 2024
Cricket
ಬೀದರ್

ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಚಂದ್ರಾಸಿಂಗ ಅಬ್ಬರದ ಪ್ರಚಾರ

Chandra Singh campaigns in Bidar South assembly constituency
Photo Credit : News Kannada

ಬೀದರ್:  ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ ಬಂಡಾಯ ಅಭ್ಯರ್ಥಿ ಚಂದ್ರಾಸಿಂಗ ಅವರು ಶನಿವಾರ ಕ್ಷೇತ್ರದ ವಿವಿಧೆಡೆ ಸಂಚರಿಸಿ ಅಬ್ಬರದ ಪ್ರಚಾರ ನಡೆಸಿದರು. ಬೀದರ ದಕ್ಷಿಣ ವಿಧಾಣಸಭಾ ಕ್ಷೇತ್ರದ ಸಿರ್ಸಿ ಎ, ಖಾಷೆಂಪುರ ಸಿ. ಭೈರನ್ನಳ್ಳಿ. ನಿಡವಂಚಾ. ಮರಕುಂದಾ ಸೇರಿದಂತೆ ಅನೇಕ ಗ್ರಾಮಗಳಿಗೆ ಭೇಟಿ ಮಾಡಿ. ಮತದಾರರಿಗೆ ಕ್ರಮ ಸಂಖ್ಯೆ 9ರ ವಿದ್ಯುತ್ ಕಂಬಕ್ಕೆ ಮತ ನೀಡುವಂತೆ ಕೋರಿದರು.

ಹೋದ ಕಡೆಗಳಲ್ಲಿ ಸಂಭ್ರಮದಿಂದ ಬರಮಾಡಿಕೊಂಡ ಅಭಿಮಾನಿಗಳು. ಕಾರ್ಯಕರ್ತರು, ಹಿತೈಷಿಗಳು ಸ್ವಾಗತಿಸಿದರು. ಕಾಂಗ್ರೆಸ ಪಕ್ಷವು ನಿಮಗೆ ಟಿಕೆಟ್ ನೀಡುತ್ತೇನೆ ಎಂದು ಹೇಳಿ ಮೋಸ ಮಾಡಿದೆ. ಆದ್ದರಿಂದ ಇಡೀ ಕ್ಷೇತ್ರದ ಜನರು ನಾವೆಲ್ಲರು ನಿಮ್ಮೊಂದಿಗೆ ಇದ್ದೇವೆ. ನಿಮ್ಮ ಗೆಲುವು ಖಂಡಿತ ಕಟ್ಟಿಟ್ಟ ಬುತ್ತಿ ಎಂದು ಮತದಾರರು ಚಂದ್ರಾಸಿಂಗ ಅವರಿಗೆ ಭರವಸೆ ನೀಡಿದರು.
ಇದೇ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಯುವ ನಾಯಕ ಚಂದ್ರಸಿಂಗ ಅವರು. ನಾನು ಕ್ಷೇತ್ರದ ಅಭಿವೃದ್ಧಿಯ ಕನಸುಗಳನ್ನು ಕಂಡಿದ್ದೇನೆ. ಯಾವುದೇ ಫಲಾಪೇಕ್ಷೆ ಇಲ್ಲದೆ 12 ವರ್ಷಗಳಿಂದ ಕ್ಷೇತ್ರದ ಜನರ ಸೇವೆಯಲ್ಲಿದ್ದೇನೆ. ಕ್ಷೇತ್ರ ಅಭಿವೃದ್ಧಿ ಮಾಡಬೇಕು ಎಂದು ಒಂದೇ ಉದ್ದೇಶಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಕ್ಷೇತ್ರ ಜನರು ನನ್ನ ಕೈ ಹಿಡಿಯಬೇಕು ಎಂದು ಮನವಿ ಮಾಡಿದರು.

ಸಿರ್ಸಿ (ಎ), ಖಾಸೆಂಪೂರ ಸಿ, ಭೈರನ್ನಳ್ಳಿ, ನಿಡವಂಚಾ ಮತ್ತು ಮರಕುಂದ ಗ್ರಾಮದಲ್ಲಿ ಚಂದ್ರಸಿಂಗ್ ರವರು ಚುನಾವಣಾ ಪ್ರಚಾರ ನಡೆಸಿ. ಮತಯಾಚನರ ಮಾಡಿದರು. ಈ ಸಂರ್ಭದಲ್ಲಿ ಅಪರವಾದ ಅಭಿಮಾನಿಗಳು, ಕಾರ್ಯಕರ್ತರು, ಗ್ರಾಮ ಪಂಚಾಯತ ಸದಸ್ಯರು, ಹಿರಿಯ ಮುಖಂಡರು, ಯುವ ನಾಯಕರು, ಮಹಿಳೆಯರು ಸೇರಿದಂತೆ ನೂರಾರು ಜನಸೇರಿ ಬ್ರಹತ್  ಬೆಂಬಲ ಸೂಚಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು