News Karnataka Kannada
Thursday, April 25 2024
ಬೀದರ್

ಚಿಟಗುಪ್ಪ: ಗುಡುಗು ಸಹಿತ ಮಳೆ – ಜನ ಜೀವನ ಅಸ್ತವ್ಯಸ್ತ

One killed after tree falls on hut in Mumbai
Photo Credit : News Kannada

ಚಿಟಗುಪ್ಪ:ಚಿಟಗುಪ್ಪ ಪಟ್ಟಣ, ತಾಲ್ಲೂಕಿನೆಲ್ಲೆಡೆ ಭಾನುವಾರ ಸಂಜೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗಿದೆ.

ಗಾಳಿ ಮಳೆಯಿಂದಾಗಿ ವಿವಿಧೆಡೆ ಮನೆಗಳ ಮೇಲಿನ ತಗಡಗಳು ಬಹುದೂರದ ವರೆಗೂ ಹಾರಿಬಿದ್ದಿವೆ. ತಾಲ್ಲೂಖಿನ ನಿರ್ಣಾ, ಮುತ್ತಂಗಿ, ಮನ್ನಾಎಖ್ಖೇಳಿ, ಮೀನಕೇರಾ, ಚಾಂಗಲೇರಾ ಗ್ರಾಮಗಳಲ್ಲಿ ಸಂಜೆ ಅರ್ಧ ಗಂಟೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.

ಗುಡುಗು ಮಿಂಚು ಜನರನ್ನು ಬೆಚ್ಚಿ ಬೀಳುವಂತೆ ಮಾಡಿತು. ಮಿಂಚಿನಿಂದ ಹಲವು ಮನೆಗಳಲ್ಲಿ ವಿದ್ಯುತ್ ಉಪಕರಣಗಳು, ಟಿವಿ ಹಾನಿಗೊಳಗಾಗಿವೆ. ಸುಮಾರು ಅರ್ಧ ಗಂಟೆ ಕಾಲ ಬಿದ್ದ ಮಳೆಯಿಂದ ತಾಪಮಾನ ಕಡಿಮೆಯಾಯಿತು.

ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದ ಚಂದ್ರಮ್ಮ ಲೇಔಟ್‌ನ ರಸ್ತೆ ಪಕ್ಕದಲ್ಲಿಯ ಪವನಕುಮಾರ ಎಂಬುವರ ಟೀ ಸ್ಟಾಲ್‌ ಬಿರುಗಾಳಿಗೆ ಉರುಳಿಬಿದ್ದಿದ್ದು, ಹಾಲು, ಸಕ್ಕರೆ, ಟೀ ಪುಡಿ, ಅಲ್ಲಾ ಇತರ ಪದಾರ್ಥಗಳು ನೀರು ಪಾಲಾಗಿವೆ ಎಂದು ಸ್ಟಾಲ್‌ ಮಾಲೀಕ ಪವನಕುಮಾರ ತಿಳಿಸಿದ್ದಾರೆ.

ಚಾಂಗಲೇರಾ ಕ್ರಾಸ್‌ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಮರ ಉರುಳಿಬಿದ್ದಿದ್ದು, ಬೈಕ್‌ನ ಟ್ಯಾಂಕ್‌ ಒಡೆದಿದೆ. ಸ್ಥಳದಲ್ಲಿದ್ದ ನಾಗರಿಕರು ಉರುಳಿಬಿದ್ದ ಮರ ಎತ್ತಿ ಬೈಕ್‌ ರಕ್ಷಿಸಿದ್ದಾರೆ.

ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಕ್ರಾಸ್‌ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಮರ ಉರುಳಿಬಿದ್ದಿದ್ದು ಬೈಕ್‌ಗೆ ಹಾನಿ ಸಂಭವಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು