ಬೀದರ್: ಎನ್.ಸಿ.ಸಿ.ಯ ಪ್ರತಿಹಂತದ ತರಬೇತಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕೆಡೆಟ್ ಕೋರ್ ನ ಬಿ.ಎಸ್. ಕನ್ವರ್ ಹೇಳಿದರು.
ಇತ್ತೀಚೆಗೆ ಬೀದರ್ ಏಯರ್ ಸ್ಕಾಡ್ರನ್ (ತಾಂತ್ರಿಕ) ಭೇಟಿ ನೀಡಿ ಗೌರವ ಸ್ವೀಕರಿಸಿ ಮಾತನಾಡಿದರು.
ನಂತರ ಸಂದರ್ಶಕ ಅಧಿಕಾರಿಗಳು ಘಟಕದಲ್ಲಿ ಲಭ್ಯವಿರುವ ತರಬೇತಿಯ ಸಾಧನಗಳು ಮತ್ತು ಸೌಲಭ್ಯಗಳನ್ನು ವೀಕ್ಷಿಸಿ ಸಲಹೆ ನೀಡಿದರು. ನಂತರ ಅವರು ಎನ್.ಸಿ.ಸಿ ಸೌಲಭ್ಯವನ್ನು ಹೊಂದಿರುವ ವಿವಿಧ ಶೈಕ್ಷಣಿಕ ಸಂಘ ಸಂಸ್ಥೆಗಳ ಅಸೋಸಿಯೇಟ್ ಎನ್.ಸಿ.ಸಿ ಆಫೀರ್ಸ್ , ಎನ್.ಸಿ.ಸಿ ತರಬೇತುದಾರರು, ಸಿಬ್ಬಂದಿವರ್ಗ ಹಾಗೂ ಕೆಡೆಟ್ಗಳ ಜೊತೆ ಸಮಾಲೋಚನೆ ನಡೆಸಿದರು.
ಕಮಾಂಡರ್ ಕರ್ನಲ್ ಡಿ.ಎಸ್.ಧಾಮಿ ಸೇನಾ ಮೆಡಲ್, ಕರ್ನಲ್ ವಿ.ಎಸ್. ಠಾಕೂರ್ ಉಪಸ್ಥಿತರಿದ್ದರು.