News Karnataka Kannada
Friday, April 26 2024
ಬೀದರ್

ಹುಮನಾಬಾದ್: ಬೇನಚಿಂಚೋಳಿ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

Humanabad: World Environment Day celebrated at Government High School Benachincholi
Photo Credit : News Kannada

ಹುಮನಾಬಾದ್: ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ )ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ಬೀದರ ಹಾಗೂ ಸರಕಾರಿ ಪ್ರೌಢಶಾಲೆ ಬೇನಚಿಂಚೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಬೀದರ ಜಿಲ್ಲೆ, ಹುಮನಾಬಾದ್ ತಾಲೂಕಿನ ಸರಕಾರಿ ಪ್ರೌಢಶಾಲೆ ಬೇನಚಿಂಚೋಳಿಯಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪರಿಸರ ದಿನದ ಕುರಿತು ವಿಶೇಷ ಉಪನ್ಯಾಸವನ್ನು ಕರ್ನಾಟಕ ಸಾವಿತ್ರಿಬಲ್ಲಿ ಶಿಕ್ಷಕಿಯರ ಸಂಘ ಜಿಲ್ಲಾ ಘಟಕ ಬೀದರ್ ನ ಉಪಾಧ್ಯಕ್ಷರಾದ ಬಾಯಿರೆಡ್ಡಿ ನೀಡಿದರು. ಮಕ್ಕಳು ಪರಿಸರವನ್ನು ಕಾಳಜಿಯಿಂದ ನೋಡಿಕೊಂಡಾಗ ನಮಗೆ ಪರಿಸರ ಪೂರಕವಾಗಿ ಇರುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿನೋದ ಗೌಡ ಅವರು ಪರಿಸರ ಸ್ವಚ್ಛತೆ ಹಾಗೂ ಪರಿಸರದಲ್ಲಿ ಸಮತೋಲನ ಹೇಗೆ ಕಾಪಾಡಬೇಕು ಎಂಬ ವಿಷಯ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷ್ಯ ಸ್ಥಾನ ವಹಿಸಿದ ಶಾಲೆಯ ಮುಖ್ಯ ಗುರುಗಳಾದ ಅರ್ಜುನ್ ಕಾಂಬಳೆ ಅವರು ಪರಿಸರ ದಿನಾಚರಣೆಯು ದಿನಾಚರಣೆ ಆಗದೆ ಅದು ಅರ್ಥಪೂರ್ಣವಾಗಬೇಕು, ವರ್ಷವಿಡಿ ಪರಿಸರದ ಬಗ್ಗೆ ಕಾಳಜಿ ತೋರಬೇಕು ಎಂದು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಸಾರಿಗೆ ಗಂಗಾ ಅವರು ಪರಿಸರದ ಕುರಿತು ಕೆಲವು ಹಾಡುಗಳನ್ನು ಹಾಡಿಸಿ ಪರಿಸರ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಶಾಲೆ ಸಿಬ್ಬಂದಿಗಳಾದ ಶ್ರೀ ರಾಜೇಂದ್ರ ಶ್ರೀ ರಮೇಶ್,ರಾಜೇಶ್,ಅಂಜಿ ರೆಡ್ಡಿ, ರೀಟಾಏವಲಿನ್ ಹಾಗೂ 8,9, 10ನೇ ತರಗತಿಯ ಮಕ್ಕಳು ಭಾಗವಹಿಸಿ ಅನೇಕ ವಿಧದ ಸಸಿಗಳನ್ನು ಕೂಡ ನೆಡುವುದರೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು.10 ನೇ ತರಗತಿಯ ವಿದ್ಯಾರ್ಥಿನಿ ಭಾಗ್ಯಶ್ರೀ ಸ್ವಾಗತ ಕೋರಿದರು, ವಿಜಯಲಕ್ಷ್ಮಿ ಹಾಗೂ ತಂಡದವರು ಪ್ರಾರ್ಥನೆ ಹಾಡಿದರು,ಸಾರಿಕಾ ಗಂಗಾ ಕಾರ್ಯಕ್ರಮ ನಿರೂಪಣೆ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು