ಬೀದರ್ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಕೂಡ ತಾನು ನೀಡಿದ ಭರವಸೆಗಳು ಮಾತ್ರ ಜನಸಾಮಾನ್ಯರಿಗೆ ಸಿಗುತ್ತಿಲ್ಲ. ಅದ್ರೆ ಇದೀಗ ರಾಜ್ಯದ ಜನರು ಮಾತ್ರ ಸರ್ಕಾರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಇನ್ನೂ ಕಾಂಗ್ರೆಸ್ ಗ್ಯಾರಂಟಿ ಉಚಿತ ವಿದ್ಯುತ್ ಎಂದು ಹೇಳಿದ್ದಾರೆ ನಾವು ಯಾವುದೇ ಕಾರಣಕ್ಕೂ ಬಿಲ್ ಪಾವತಿ ಮಾಡುವುದಿಲ್ಲ ಎಂದು ಜೆಸ್ಕಾಂ ಸಿಬ್ಬಂದಿಗಳಿಗೆ ಆವಾಜ್ ಹಾಕುತ್ತಲೇ ಇದ್ದಾರೆ.
ಹೌದು , ಇಂತಹದೇ ಒಂದು ಘಟನೆ ಬೀದರ್ ನ ಯದ್ಲಾಪುರ್ ದಲ್ಲಿ ನಡೆದಿದೆ. ನಾನು ಕರೆಂಟ್ ಬಿಲ್ ಒಂದು ರೂಪಾಯಿನೂ ಕಟ್ಟಲ್ಲ, ನೀವು ಸಿಎಂ ಸಿದ್ದರಾಮಯ್ಯ ಮನೆಗೆ ಹೋಗಿ ಕೇಳಿ ಎಂದು ಜೆಸ್ಕಾಂ ಸಿಬ್ಬಂದಿಗೆ ವ್ಯಕ್ತಿಯೋರ್ವ ಆವಾಜ್ ಹಾಕಿರುವ ಘಟನೆ ನಡೆದಿದ್ದು, ಈ ಬಗ್ಗೆ ಜೆಸ್ಕಾಂ ಸಿಬ್ಬಂದಿ ಬಾಕಿ ವಿದ್ಯುತ್ ಬಿಲ್ ಕಟ್ಟುವಂತೆ ಕೇಳಿದಾಗ ಆ ವ್ಯಕ್ತಿ ಹೀಗೆ ಪ್ರತಿಕ್ರಿಯೆ ನೀಡಿದ್ದಾನೆ.
ಕಾಂಗ್ರೆಸ್ ಸರ್ಕಾರ ಬಂದಿದೆಯಲ್ಲ, ಈಗ ವಿದ್ಯುತ್ ಫ್ರೀ ಇದೆ ಎಂದ ವ್ಯಕ್ತಿ, ನೀವು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹತ್ತಿರ ಹೋಗಿ ಎಂದು ಹೇಳಿದ್ದಾನೆ.