ಬೀದರ್: ಹುಡುಗಿ ಗ್ರಾಮದ ಶಿವಾರದ ಠಾಕೂರ ಧಾಬಾ ಹಿಂದುಗಡೆ ಮೌನೇಶ್ವರ ಮಂದಿರ ಹತ್ತಿರ ಇರುವ ಠಾಕೂರ ಅವರ ಒಂದು ಶೆಡ್ಡಿನಲ್ಲಿ ಅನಧಿಕೃತವಾಗಿ ಬ್ಯಾರಲ್ ಮತ್ತು 3 ಟ್ಯಾಂಕರ್ ಲಾರಿಗಳಲ್ಲಿ ಮಾನವ ಜೀವಕ್ಕೆ ಹಾನಿಯಾಗುವಂತಹ ಕೆಮಿಕಲ್ ಸಂಗ್ರಹಿಸಿದ್ದು, ಮೇ 24 ರಂದು ದಾಳಿ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಬೀದರ ಪೊಲೀಸ್ ಅಧೀಕ್ಷಕ ಚನ್ನಬಸವಣ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ ಹಾಗೂ ಹುಮನಾಬಾದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಜಪೂತ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ಸದರಿ ದಾಳಿಯಲ್ಲಿ ಆರೋಪಿತರ 3 ಕೆಮಿಕಲ್ ತುಂಬಿರುವ ಟ್ಯಾಂಕರುಗಳು, 43 ಕೆಮಿಕಲ್ ತುಂಬಿರುವ ಬ್ಯಾರಲ್ ಸೇರಿದಂಎ ಒಟ್ಟು 81 ಟನ್ 6 ಕ್ವಿಂಟಾಲ್ ಕೆಮಿಕಲ್ನ್ನು ಅದರ ಅಂದಾಜು 8759324 ರೂಪಾಯಿ ಬೆಳೆಬಾಳುವ ಕೆಮಿಕಲ್ ಹಾಗೂ ಲಾರಿಗಳನ್ನು ಜಪ್ತಿ ಪಡಿಸಿಕೊಂಡು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.