News Karnataka Kannada
Thursday, May 02 2024
ಬೀದರ್

ಔರಾದ್‌ನಲ್ಲಿ ಬದಲಾವಣೆಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಡಾ. ಭೀಮಸೇನರಾವ್‌ ಶಿಂಧೆ

Support Congress for change in Aurad: Dr. Manmohan Singh Bhimsenrao Shinde
Photo Credit : News Kannada

ಔರಾದ : ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿರುವ ಪ್ರಭು ಚವ್ಹಾಣ್ ಅವರನ್ನು ಕೆಳಗಿಳಿಸಿ ಒಮ್ಮೆ ನನಗೆ ಆಯ್ಕೆ ಮಾಡಿ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ್‌ ಶಿಂಧೆ ಮನವಿಸಿದರು.

ತಾಲೂಕಿನ ಚೋ೦ಡಿಮುಖೇಡ್, ನಂದಿಬಿಜಲಗಾಂವ್, ನಂದಿಬಿಜಲಗಾಂವ ತಾಂಡಾ, ಕಿಸಾನ್ ನಾಯ್ಕ ತಾಂಡ, ಸೊಸೈಟಿ ತಾಂಡ, ದಾಸರ ತಾಂಡ, ಚಿಕ್ಲಿ (ಯು), ಗಣೇಶಪೂರ (ಯು), ವಾಗನಗೇರಾ, ವಾಗನಗೇರಾ ತಾಂಡ, ಅಕನಾಪೂರ, ಗಂಗನಬೀಡ, ದಾಬಕಾ, ಮುತ್ತಖೇಡ್, ಬೇರ್ಡಾ ಗ್ರಾಮದಲ್ಲಿ ಮತಯಾಚನೆ ಮಾಡುವ ಮೂಲಕ ಮಾತನಾಡಿದರು.

ಔರಾದ್ ಮೀಸಲು ಕ್ಷೇತ್ರ ಕಳೆದ 15 ವರ್ಷದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಕ್ಷೇತ್ರ ಅಭಿವೃದ್ಧಿಯಾಗಬೇಕೆ೦ಬುವದು ಇಲ್ಲಿನ ಲಕ್ಷಾಂತರ ಜನರ ಸಂಕಲ್ಪವಾಗಿದೆ. ಬಿಜೆಪಿಯ ಕಮಿಷನ್ ಸರ್ಕಾರಕ್ಕೆ ಬೇಸತ್ತು ಜನ ಬದಲಾವಣೆ ಬಯಸಿದ್ದಾರೆ. ಔರಾದ್ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಭು ಚವ್ಹಾಣ್‌ ರನ್ನು ಮನೆಗೆ ಕಳುಹಿಸಿ ನನಗೆ ವಿಧಾನಸಭೆಗೆ ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ಏಕತಾ ಪೌಂಡೇಶನ್ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಸ್ವಾಮಿ, ಮುಖಂಡ ಚರಣಸಿಂಗ್ ರಾಠೋಡ್ ಮಾತನಾಡಿದರು.
ಪ್ರಮುಖರಾದ ಮೀನಾಕ್ಷಿ ಸಂಗ್ರಾಮ, ಡಾ. ಲಕ್ಷ್ಮಣ ಸೋರಳ್ಳಿಕರ್, ರಮೇಶ ದೇವಕತ್ತೆ, ಅರುಣ ಪಾಟೀಲ್‌, ಧನಾಜಿ ಜಾಧವ್, ಸಿದ್ದಾರ್ಥ ರಾಠೋಡ್, ಆನ೦ದ ಚವ್ಹಾಣ್‌, ತೇಜರಾವ ಮೂಳೆ, ಶಿವರಾಜ ದೇಶಮುಖ, ಪ್ರಕಾಶ ಪಾಟೀಲ್, ಚನ್ನಪ್ಪ ಉಪ್ಪೆ, ಸುಧಾಕರ್ ಕೊಳ್ಳುರ್, ಕಾಶಿನಾಥ ಜಾಧವ್, ಹಣಮಂತ ಸೂರ್ಯವಂಶಿ, ವೆಂಕಟರಾವ್‌ ಶಿಂಧೆ, ಡಾ. ಫೈಯಾಜ್ ಅಲಿ, ರೈತ ಸಂಘದ ಅಧ್ಯಕ್ಷ ಶ್ರೀಮಂತ ಬಿರಾದಾರ್ ಸೇರಿದಂತೆ ಅನೇಕರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು