News Kannada
Monday, December 11 2023
ಕಲಬುರಗಿ

ಬೆಲೆ ಏರಿಕೆ ಮೂಲಕ ಜನರ ಪಿಕ್ ಪಾಕೇಟ್ ಗೆ ಬಿಜೆಪಿ ಯತ್ನ: ಡಿ.ಕೆ.ಶಿ ಆಕ್ರೋಶ

PHOTO 5 1
Photo Credit :

ಕಲಬುರಗಿ: ಬಿಜೆಪಿಯವರು ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಮಾಡುವ ಮೂಲಕ ಜನರ ಪಿಕ್ ‌ಪಾಕೇಟ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ವಾಗ್ಧಾಳಿ ನಡೆಸಿದ್ದಾರೆ‌.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಜನರಿಂದ ಪಿಕ್‌ಪಾಕೇಟ್ ಮಾಡುವುದಕ್ಕೆ ಪ್ರಾರಂಭ ಮಾಡಿದೆ. ಪಂಚರಾಜ್ಯ ಚುನಾವಣೆ ಮುಗಿಯೊವರೆಗೆ ಸುಮ್ಮನಿದ್ದು, ಈಗ ಚುನಾವಣೆ ಮುಗಿದ ಮೇಲೆ ಮತ್ತೆ ಬೆಲೆ ಏರಿಕೆ ಸ್ಟಾರ್ಟ್ ಮಾಡಿದ್ದಾರೆ. ಜನರ ಆಧಾಯ ಮಾತ್ರ ಇರುವಷ್ಟೆ ಇದೆ.ಆದರೆ ಬೆಲೆಗಳು ಮಾತ್ರ ಗಗನಕ್ಕೆ ಏರಿಕೆ ಆಗುತ್ತಿದೆ ಎಂದರು.

ಖರ್ಚು ಹೆಚ್ಚಾಗಿ ಜನರು ತಾಳ್ಮೆ ಕಳೆದುಕೊಳ್ಳುವ ಸಮಯ ಸೃಷ್ಟಿಯಾಗುತ್ತಿದೆ. ಬೆಲೆ ಏರಿಕೆ ಹಾಗೂ ಬಿಜೆಪಿಯವರ ಪಿಕ್‌ಪಾಕೇಟ್ ವಿರೋಧಿಸಿ ರಾಜ್ಯಮಟ್ಟದಲ್ಲಿ ವ್ಯಾಪಕ ಹೋರಾಟ ನಡೆಸಲು ತಿರ್ಮಾನಿಸಲಾಗಿದೆ. ಇಷ್ಟರಲ್ಲೆ ಹೋರಾಟದ ರೂಪರೇಷ ತಯಾರಿಸಿ ಪ್ರಕಟಿಸುವದಾಗಿ ಡಿಕೆಶಿ ಹೇಳಿದರು. ಅಲ್ಲದೆ ರಾಜ್ಯದಲ್ಲಿ ಪೆಟ್ರೋಲ್ ಗ್ಯಾಸ್ ಬೆಲೆ ಏರಿಕೆ ಆಗದಂತೆ ಸೇಸ್ ರಾಜ್ಯ ಸರ್ಕಾರ ಬರಿಸಲು ಸಿಎಂ ಅವರಿಗೆ ಆಗ್ರಹಿಸುವದಾಗಿ ಹೇಳಿದರು.

ರಾಜ್ಯದಲ್ಲಿಯೂ ಬಿಜೆಪಿ ಜನರ ಲೂಟಿಗೆ ಇಳಿದಿದೆ. ಬಿಡಿಎ ಜಾಗಕ್ಕೆ ಸ್ಕ್ವಾಯರ್ ಫೀಟ್ ಲೆಕ್ಕದಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುತ್ತಿದೆ ಎಂದು ಡಿಕೆಶಿ ಆರೋಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬ ಅಗತ್ಯ

ನಮ್ಮನ್ನು ಕಷ್ಟಕಾಲದಲ್ಲಿ ಗಾಂಧಿ ಕುಟುಂಬ ಉಳಿಸಿದೆ. ಎರಡು ಬಾರಿ ಮನಮೋಹನ ಸಿಂಗ್ ಅವರನ್ನು ಕರೆದು ಪ್ರಧಾನಿ ಮಾಡಿದ ಕುಟುಂಬ ಇದು. ಜಿ- 23 ಯಾರು ಏನು‌ ಮಾತಾಡಿಲ್ಲ, ಗಾಂಧಿ ಕುಟುಂಬ ಇಲ್ಲವೆಂದರೆ ಕಾಂಗ್ರೆಸ್ ಇಲ್ಲ, ನೋ ಕಾಂಗ್ರೆಸ್ ವಿತ್‌ಔಟ್ ಗಾಂಧಿ ಫ್ಯಾಮಿಲಿ ಎಂದು ಪ್ರತಿಪಾದಿಸಿದರು.

ಪಠ್ಯಪುಸ್ತಕದಲ್ಲಿ ಭಗವದ್ಗೀತೆ ವಿಚಾರ

ಕಾಂಗ್ರೆಸ್ ಭಗವದ್ಗೀತೆ ವಿರೋಧಿ ಅಲ್ಲ, ರಾಜೀವ್ ಗಾಂಧಿ ಪ್ರಧಾನಿ ಇದ್ದಾಗ ದೂರದರ್ಶನದಲ್ಲಿ ರಾಮಾಯಣ , ಮಹಾಭಾತತ ಬಗ್ಗೆ ತೋರಿಸಿ ಭಗವದ್ಗೀತೆ ಬಗ್ಗೆ ಜನರಿಗೆ ತಲುಪಿಸಿದ್ದೆ ಕಾಂಗ್ರೆಸ್ ಪಕ್ಷ ಎಂದರು. ಯದಾ ಯದಾ ಹೀ ಧರ್ಮಸ್ಯ’ ಶ್ಲ್ಯೋಕ್ ಹೇಳಿದ ಡಿಕೆಶಿ, ಇದೇನು ಬಿಜೆಪಿ ಅವರು ನನಗೆ ಹೇಳಿಕೊಟ್ಟಿದ್ದಾ ಎಂದು ಪ್ರಶ್ನೆ ಮಾಡಿದರು.

ಧರ್ಮ ಯಾವುದಾದರೇನೂ, ತತ್ವ ಒಂದೆ. ದೇವರು ಹಲವು ನಾಮ ಹಲವು, ಅನೇಕ ಧರ್ಮಗಳಲ್ಲಿ ಒಳ್ಳೆಯ ವಿಚಾರಗಳಿವೆ ಅವು ಅಳವಡಿಸಿಕೊಳ್ಳಬೇಕು. ಈಗ ಹಿಂದುತ್ವ ತಮ್ಮ ಆಸ್ತಿ ಎಂಬಂತೆ ಬಿಜೆಪಿ ಹೇಳುತ್ತಿದೆ ಎಂದರು.

ಇದೇ ವೇಳೆ ಮಹಾರಾಷ್ಟ್ರದ ಶಿವಸೇನೆಯ ನಾಯಕ ಸಂಜಯ್ ರಾವತ್ ಬೆಳಗಾವಿ ಫೈಲ್ಸ್ ಎಂಬ ವಿವಾಧಿತ ಪೊಸ್ಟ್ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ ಎದ್ದು ನಡೆದರು.

See also  ಹೆಂಡತಿ ತಲೆ ಮೇಲೆ ಸಿಲಿಂಡರ್ ಎತ್ತಿ ಹಾಕಿ ಕೊಂದ ಪಾಪಿ ಪತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು