ಚಿತ್ತಾಪುರ: ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಾಳೆ ಹಣ್ಣು ವಿತರಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಗಂಗಮ್ಮ ನಾಲವಾರ ಅವರು ಗ್ರಾಮದ ಪ್ರಗತಿಪರ ರೈತ, ಸಾವಯುವ ಕೃಷಿ ಪದ್ಧತಿ ಅನುಸರಿಸಿ ಬಾಳೆ ಬೆಳೆದ ಉಲ್ಲಾಸ ದೇಶಪಾಂಡೆ, ಭೀಮಣ್ಣಗೌಡ ಮೂಲಿಮನಿ ಅವರಿಂದ ಹಣ್ಣು ಖರೀದಿಸಿ ರೈತರಿಗೂ ನೆರವಾಗಿದ್ದಾರೆ ಎಂದು ಗ್ರಾಮದ ಮಲ್ಲಿಕಾರ್ಜುನ ಕೇಶ್ವಾರ, ಸಲೀಂ ಮುಲ್ಲಾ, ರಾಜು ಪಟೇದ್, ಶರಣು ಭೈರಾಮಡಗಿ ಅವರು ಹೇಳಿದರು.